ಕೋಲಾರ: ಸಮಸ್ತ ರೈತ ಭಾಂದವರೇ ದಯವಿಟ್ಟು ಬೆಳೆದ ಬೆಳೆಯನ್ನು ಬೀದಿಗೆ ಸುರಿಯಬೇಡಿ, ಎಂದಿನಂತೆಯೇ ಮಾರುಕಟ್ಟೆಗೆ ಕಳುಹಿಸಬೇಕೆಂದು ರೈತರಲ್ಲಿ ಪತ್ರಿಕೆಯ ಮುಖಾಂತರ ರೈತ ಸಂಘಧ ಕೆ.ನಾರಾಯಣಗೌಡ ಮನವಿ ಮಾಡಿದರು.

ಪತ್ರಿಕೆ ಹೇಳಿಕೆ ನೀಡಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಪ್ರಪಂಚದಾದ್ಯಂತ ಹಸಿವು ನೀಗಿಸುವ ಸಾಮರ್ಥವಿರುವುದು ರೈತಣ್ಣನಿಗೆ ಮಾತ್ರ ಈ ದಿನ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಲಿಲ್ಲವೆಂದು ದೃತಿಗೆಡೋದು ಬೇಡ ಗಟ್ಟಿ ಮನಸ್ಸಿನಿಂದ ಒಬ್ಬರಿಗೊಬ್ಬರು ದೈರ್ಯ ತುಂಬಿಕೊಳ್ಳಬೇಕಿದೆ.
ಕಷ್ಟ ಚಿರಕಾಲವಿರುವುದಿಲ್ಲ ಮುಂದಿನ ದಿನಗಳಲ್ಲಿ ರೈತರೇ ಸಾರ್ವಔಮರೆಂದು ಜಗತ್ತಿಗೆ ಅರಿವಾಗುವ ಸಮಯ ಹತ್ತಿರದಲ್ಲಿದೆ ನಮ್ಮ ರೈತರಲ್ಲಿ ಕಳಕಳಿಯ ಮನವಿ ಬೆಲೆ ಸಿಗಲಿಲ್ಲವೆಂದು ಯಾವುದೇ ದುಡುಕಿನ ನಿರ್ದಾರ ತೆಗೆದುಕೋಳ್ಳಬೇಡಿ ದಯವಿಟ್ಟು ಬೆಲೆ ಸಿಗಲಿಲ್ಲವೆಂದು ಬೆಳೆದ ಪಸಲನ್ನು ಬೀದಿಯ ಚಳಿ ದೇಶದ ಜನತೆಗೆ ಕೆಟ್ಟ ಸಂದೇಶ ನೀಡುವುದು ಬೇಡ
ನಾವೂ ನೀವು ಹಸಿದವರಿಗೆ ಅನ್ನ ನೀಡುವವರೇ ಕೈ ಚಾಚುವವರಲ್ಲವೆಂದು ಜಗವರಿಯದ ಸತ್ಯ ಅದೇ ರೀತಿ ಪಸಲನ್ನು ಬೀದಿಯಲ್ಲಿ ಹಾಕುವ ಬದಲಿಗೆ ದೇಶದ ಪ್ರಜೆಗಳು ಹಸಿವಿನಿಂದ ತಲ್ಲಣವಾಗುತ್ತಿದ್ದಾರೆ. ನಮ್ಮ ಪಸಲನ್ನು ಬಡ ಶ್ರಮಿಕ ವರ್ಗದವರಿಗೆ ವಿತರಿಸಿ ದೊಡ್ಡ ಗುಣ ಮೆರೆಯುವಂತಹ ಸಮಯ ದಯವಿಟ್ಟು ಸ್ವಾಭಿಮಾನದಿಂದ ಬಾಳುವ ರೈತ ಭಾಂದವರು ಬೆಳೆದ ಪಸಲನ್ನು ಯಾರು ರಸ್ತೆಗೆ ಸುರಿಯಬೇಡಿ ನಿಮ್ಮೊಂದಿಗೆ ರೈತ ಸಂಘ, ಜಿಲ್ಲಾಡಳಿತ ಇರುತ್ತದೆಂದು ರೈತರಿಗೆ ದೈರ್ಯ ತುಂಬಿದರು.
