ಬಂಟ್ವಾಳ:  ತಾಲೂಕಿನ ಕಾವಳಪಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ  ಹಂಚಿಕಟ್ಟೆ ಎಂಬಲ್ಲಿ ಗ್ರಾಮ ಪಂಚಾಯತ್ ಹಾಗೂ ಹಿಂದೂ ರುದ್ರಭೂಮಿ ನಿರ್ಮಾಣ ಸಮಿತಿ ಮತ್ತು ದಾನಿಗಳ ವತಿಯಿಂದ ಸುಮಾರು ೧೫ ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಹಿಂದೂ ರುದ್ರಭೂಮಿಯ ಲೋಕಾರ್ಪಣೆ ಕಾರ್ಯಕ್ರಮ ಮಂಗಳವಾರ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ನೂತನ ಹಿಂದೂ ರುದ್ರಭೂಮಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಪಂಚಾಯತ್ ನಿಕಟಪೂರ್ವ ಆಡಳಿತ ಸಮಿತಿಯ ರುದ್ರಭೂಮಿ ನಿರ್ಮಾಣ ಕಾರ್ಯ ಶ್ಲಾಘನೀಯ .ಇದಕ್ಕೆ ಕೈಜೋಡಿಸಿದ ಎಲ್ಲರೂ ಅಭಿನಂದನೀಯರು ಎಂದು ಹೇಳಿದರು.

ಶ್ರೀ ಕ್ಷೇತ್ರ ಕಾರಿಂಜದ ಮಾಜಿ ಆಡಳಿತ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ ಅವರು ಉದ್ಘಾಟಿಸಿದರು. ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು,ನಿಕಟಪೂರ್ವ ಅಧ್ಯಕ್ಷ ಲಕ್ಷ್ಮಿ ನಾರಾಯಣ ಶರ್ಮ, ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ಶೃತಾಂಜನ್ ಜೈನ್ ಆಲಂಪುರಿಗುತ್ತು, ನಿಕಟಪೂರ್ವ ಸದಸ್ಯರಾದ ಜಿನೇಂದ್ರ ಜೈನ್, ಉಮೇಶ್, ಭವಾನಿ ಶ್ರೀಧರಪೂಜಾರಿ, ಶಿವಪ್ರಸಾದ್, ಕಾವಳಮೂಡೂರು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಅಜಿತ್ ಕುಮಾರ್ ಶೆಟ್ಟಿ, ವಗ್ಗ ಹಾ.ಉ.ಸ.ಸಂಘದ ಅಧ್ಯಕ್ಷ ಶಿವಪ್ಪ ಗೌಡ ನಿನ್ನಿಕಲ್ಲು,ಪಂಚಾಯತ್ ಆಡಳಿತಾಽಕಾರಿ ನಟೇಶ್ ಕುಮಾರ್ ಪಂ.ಅ.ಅಽಕಾರಿ ರಚನ್ ಕುಮಾರ್, ಕಾರ್ಯದರ್ಶಿ ವಿಮಲಾ, ಸಿಬಂದಿಗಳಾದ ರಾಜಶೇಖರ ಪ್ರಭು,ವಾಮನ,  ದಿವಾಕರ ಗುತ್ತಿಗೆದಾರ ರಿಯಾಝ್ ಮತ್ತಿತರರು ಉಪಸ್ಥಿತರಿದ್ದರು. ಬೆಳಗ್ಗೆ ಗಣ ಹೋಮ ನಡೆಯಿತು

By suddi9

Leave a Reply

Your email address will not be published. Required fields are marked *