ಬಂಟ್ವಾಳ: ತಾಲೂಕಿನ ಅನಂತಾಡಿ ಮತ್ತು ನೆಟ್ಲ ಮುಡ್ನೂರು ಈ ಎರಡೂ ಗ್ರಾಮವನ್ನು ಸಂಪರ್ಕಿಸುವ ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಸ್ತೆಯನ್ನು ಸರ್ವಋತು ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಶಾಸಕರ ವಿಶೇಷ ಅನುಧಾನ 40 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು,ಇದರ ಕಾಮಗಾರಿಗೆ ಮಂಗಳವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕರು ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅತ್ಯಂತ ಪುರಾತನ ಮತ್ತು ಬಹಳ ಪ್ರಸಿದ್ಧಿಯಾಗಿದ್ದು, ಇಲ್ಲಿಗಾಗಮಿಸುವ ಭಕ್ತರಿಗೆ ಅನುಕೂಲವಾಗುವ ಮತ್ತು ಎರಡು ಗ್ರಾಮದ ಜನರಿಗೂ ಸಹಕಾರಿಯಾಗುವ ನಿಟ್ಟಿನಲ್ಲಿ 40 ಲಕ್ಷ ವೆಚ್ಚದಲ್ಲಿ ಈ ರಸ್ತೆಗೆ ಕಾಂಕ್ರೀಟಿಕರಣಗೊಳಿಸಿ ಅಭಿವೃದ್ಧಿ ಪಡಿಸಲಾಗುತ್ರಿದೆ ಎಂದರು.

ಕಾಮಗಾರಿಯಲ್ಲು ಗುಣಮಟ್ಟವನ್ನು ಕಾಯ್ದುಕೊಂಡು ಉತ್ತಮ ರಸ್ತೆಯನ್ನು ನಿರ್ಮಿಸುವ ಭರವಸೆಯನ್ನು ವ್ಯಕ್ತಪಡಿಸಿದ ಶಾಸಕ ರಾಜೇಶ್ ನಾಯ್ಕ್ ಕಾಮಗಾರಿ ವೇಳೆ ಗ್ರಾಮಸ್ಥರ ಸಹಕಾರವು ಅತ್ಯಗತ್ಯವಾಗಿದ್ದು, ಜನರಿಗೂ ತೊಂದರೆಯಾಗದಂತೆ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸುವಂತೆ ತಿಳಿಸಿದರಲ್ಲದೆ ಬಂಟ್ವಾಳ ಕ್ಷೇತ್ರಕ್ಕೆ ಬರುವ ಎಲ್ಲಾ ಅನುದಾನವನ್ನು ಬಳಸಿಕೊಂಡು ಆದ್ಯತೆಯ ನೆಲೆಯಲ್ಲಿ ಕೆಲಸ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ನೇರಳಕಟ್ಟೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪುಷ್ಪರಾಜ ಚೌಟ, ಉಪಾಧ್ಯಕ್ಷ ತನಿಯಪ್ಪ ಗೌಡ, ಮಂಡಲದ ಕೇತ್ರ ಕಾರ್ಯದರ್ಶಿ ಸನತ್ ಕುಮಾರ್ ರೈ, ಬಿಜೆಪಿ ಮಾಹಾ ಶಕ್ತಿ ಕೇಂದ್ರದ ಅಧ್ಯಕ್ಷ ಅರವಿಂದ ರೈ, ಕಾರ್ಯದರ್ಶಿ ನಾಗೇಶ್ ಭಂಡಾರಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಸುರೇಶ್ ,ಉಪಾಧ್ಯಕ್ಷೆ ಸಂಧ್ಯಾವಿಶ್ವನಾಥ, ಕರಿಂಕ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನರೇಂದ್ರ ರೈ ನೆಲ್ತೊಟ್ಟು, ಬಿಜೆಪಿ
ಗ್ರಾಮ ಪ್ರಮುಖ್ ರಾದ ಮಹಾಬಲ ಪೂಜಾರಿ ಬಾಕಿಲ, ನವೀನ ಆಚಾರ್ಯ, ಶಿವರಾಮ್ ಶೆಟ್ಟಿ ಕರಿಂಕ, ಧನಂಜಯ ಗೌಡ ಮೀನಾವು ಮಹಿಳಾ ಮೋರ್ಚಾ ,ಉಪಾಧ್ಯಕ್ಷೆ ಗೀತಾಚಂದ್ರಶೇಖರ್ ಗೋಳಿಕಟ್ಟೆ, ಬಿಜೆಪಿ ಪ್ರಮಖರಾದ ಜ್ಯೋತಿ ಹೆಗ್ಡೆ, ನವೀನ್ ಶೆಟ್ಟಿ, ಶಕೀಲ ಕೃಷ್ಣಪ್ಪ ಪೂಜಾರಿ, ಅಶೋಕ್ ರೈ ಎಲ್ಕಾಜೆ, ಬಾಲಕೃಷ್ಣ ನಾಯ್ಕ್, ಬಾಲಕೃಷ್ಣ ಪೂಜಾರಿ ಸಾಯಿ , ದಯಾನಂದ ಗೌಡ,ರಾಮಪ್ಪ ಗೌಡ,ಜಯರಾಮ್ ಆಚಾರಿ , ರಮೇಶ್ ಗೌಡ,ಕೃಷ್ಣಪ್ಪ ಗೌಡ, ಶಿವಾನಂದ ಶೆಟ್ಟಿ, ಕುಸುಮಧರ, ಧರ್ನಪ್ಪ ಗೌಡ,ಗಣೇಶಾನಂದ ಶೆಟ್ಟಿ, ಉದಯ ಗೌಡ ಕೊಂಕನೋಡಿ, ವಸಂತ್ ರಾಜ್ ಭಟ್,ಚೇತನ್ ರೈ,
ಸ್ಥಳದಾನಿಗಳಾದ ರಾಧಾ ಕೃಷ್ಣ ಭಾಗವತ್, ಕೆ.ಟಿ.ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
