ಅಂಗನವಾಡಿಯಲ್ಲಿ ಎಲ್ ಕೆ ಜಿ ಮತ್ತು ಯುಕೆಜಿ ತರಗತಿ ಆರಂಭ
ಬಂಟ್ವಾಳ:ತಾಲೂಕಿನ ಇರ್ವತ್ತೂರು ಗ್ರಾ.ಪಂ.ವ್ಯಾಪ್ರಿಯ ಕೊಳಲಬಾಕಿಮಾರು
ಅಂಗನವಾಡಿ ಕೇಂದ್ರದಲ್ಲಿ ಎಲ್ ಕೆ ಜಿ ಮತ್ತು ಯುಕೆಜಿ ತರಗತಿ ಆರಂಭಗೊಂಡಿತು.
ಸ್ಥಳೀಯ ವೈದ್ಯರಾದಡಾ. ರಾಮಕೃಷ್ಣ ಅವರು ಎಲ್ ಕೆ ಜಿ ಮತ್ತು ಯುಕೆಜಿ ತರಗತಿಯನ್ನು ಉದ್ಘಾಟಿಸಿ ಶುಭಹಾರೈಸಿದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಿಶಾಂತ್.ಗ್ರಾಮ ಪಂಚಾಯಿತಿಯ ಸದಸ್ಯರಾದ ಸುಧೀಂದ್ರ ಶೆಟ್ಟಿ, ಹರಿಣಾಕ್ಷಿ,ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಮಾಲತಿ, ವಿಮಲಾ, ಮಂಜುನಾಥ ಪೂಜಾರಿ, ಯಶೋಧ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕಿ ನಿಖಿತಾ ಕೆ. ಸ್ವಾಗತಿಸಿದರು. ಅರುಂಧತಿ ಪ್ರಸ್ತಾವನೆಗೈದರು. ಅಂಗನವಾಡಿ ಶಿಕ್ಷಕಿ ವನಿತಾ ವಂದಿಸಿದರು.



