ಕೂಟ ಮಹಾ ಜಗತ್ತು ಬಂಟ್ವಾಳ ಅಂಗ ಸಂಸ್ಥೆಯ ಸಂಪರ್ಕ ಸಭೆ
ಬಂಟ್ವಾಳ: ಕೂಟ ಮಹಾ ಜಗತ್ತು ಬಂಟ್ವಾಳ ಅಂಗ ಸಂಸ್ಥೆಯ ಹನ್ನೆರಡನೇ ಸಂಪರ್ಕ ಸಭೆಯು ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ಮನೆಯಲ್ಲಿ ನಡೆಯಿತು.

ಅಂಗ ಸಂಸ್ಥೆಯ ಅಧ್ಯಕ್ಷ ಕೆ ರಮೇಶ್ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಗಣಪತಿ ಸೋಮಯಾಜಿ , ಪ್ರದೀಪ್ ಎನ್. ಹೊಳ್ಳ, ಕಾರ್ಯದರ್ಶಿ ರಾಮಕೃಷ್ಣರಾವ್, ವಕೀಲರಾದ ನಾರಾಯಣ ಸೋಮಯಾಜಿ, ಕೂಟ ಬಂಧು ಟ್ರಸ್ಟ್ ನ ಅರ್ಬಿ ನಾರಾಯಣ ಸೋಮಯಾಜಿ,ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಜಯಶಂಕರ ಭಾಸ್ರಿತ್ತಾಯ, ವಿಶ್ವ ಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಸಂಚಾಲಕ ಪ್ರಶಾಂತ ಹೊಳ್ಳ, ಸೋಮಶೇಖರಮಯ್ಯ, ವೇದಾನಂದ ಕಾರಂತ,ಧನೇಶ್ವರ ರಾವ್, ಮಹಿಳಾ ವೇದಿಕೆ ಅಧ್ಯಕ್ಷೆ ಉಷಾ ಪ್ರಭಾಕರ್ , ಕೇಂದ್ರ ಸಮಿತಿ ಪ್ರಮುಖರಾದ ಭಾರತೀ ಶ್ರೀಧರ್ ,ರವಿಶಂಕರ ಮಯ್ಯ, ಬಿಲಿಯನ್ ಫೌಂಡೇಶನ್ ಕಾರ್ಯದರ್ಶಿ ನರೇಶ್ ಹೊಳ್ಲಕ, ರಾಮಚಂದ್ರ ಮಯ್ಯ ದಳದವರು ಉಪಸ್ಥಿತರಿದ್ದರು.
ಕೂಟ ಮಹಾ ಜಗತ್ತು ಬಂಟ್ವಾಳ ಅಂಗ ಸಂಸ್ಥೆಗೆ ಸ್ವಂತ ನಿವೇಶನ ಹಾಗೂ ಸಮುದಾಯ ಭವನ ನಿರ್ಮಿಸಲು ತೀರ್ಮಾನಿಸಲಾಯಿತು



