ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಕುಕ್ಕಾಜೆ 4 ನೇ ಶಾಖೆಗೆ 25 ವರ್ಷದ ಸಂಭ್ರಮ; “ಸದಸ್ಯ ಗ್ರಾಹಕ ಸಮ್ಮಿಲನ” ವಿನೂತನ ಕಾರ್ಯಕ್ರಮ

ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ, ಬಂಟ್ವಾಳ ಇದರ ಕುಕ್ಕಾಜೆ 4 ನೇ ಶಾಖೆಯು 25 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸಂಘದ ವತಿಯಿಂದ “ಸದಸ್ಯ ಗ್ರಾಹಕ ಸಮ್ಮಿಲನ” ಎಂಬ ವಿನೂತನ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ ಸುರೇಶ್ ಕುಲಾಲ್ ಮಾತನಾಡಿ, ‘ಈ ಶಾಖೆಯ ಏಳಿಗೆಗೆ ಶ್ರಮಿಸಿದ ಎಲ್ಲಾ ಸದಸ್ಯ ಗ್ರಾಹಕರಿಗೆ ಅಭಿನಂದನೆ ಸಲ್ಲಿಸಿದರಲ್ಲದೆ ಮುಂದಿನ ದಿನಗಳಲ್ಲು ಎಲ್ಲರ ಸಹಕಾರಬೇಕು ಎಂದು ಕೇಳಿ ಕೊಂಡರು. ಸ್ವಾತಂತ್ರ್ಯ ಹೋರಾಟಗಾರರಾದ ‘ಸಮಾಜರತ್ನ’ ದಿ.ಡಾ. ಅಮ್ಮೆಂಬಳ ಬಾಳಪ್ಪರವರ ನೇತೃತ್ವ ಹಾಗೂ ಸಹಕಾರಿ ಧುರಿಣ ಬಿ. ಹೂವಯ್ಯ ಮೂಲ್ಯರವರ ಸಾರಥ್ಯದಲ್ಲಿ ಆರಂಭಗೊಂಡಿದ್ದ ಬ್ಯಾಂಕ್ ಪ್ರಸ್ತುತ ಸಂಘವು 16 ಶಾಖೆಗಳನ್ನು ಒಳಗೊಂಡಿದ್ದು ಉತ್ತಮ ವ್ಯವಹಾರವನ್ನು ನಡೆಸುತ್ತ ಬಂದಿದೆ ಎಂದು ತಿಳಿಸಿದರು.
2024 ಸೆ.30 ರ ಅಂತ್ಯದಲ್ಲಿ 7.99. ಕೋ.ರೂ. ಪಾಲು ಬಂಡವಾಳ, 19.61 ಕೋ.ರೂ.ನಿಧಿಗಳು, 225. 81 ಕೋ.ರೂ.ಠೇವಣಾತಿಗಳು, 59.86 ಕೋ.ರೂ. ವಿನಿಯೋಗಗಳು ಮತ್ತು 202.86 ಕೋ.ರೂ. ಹೊರಬಾಕಿ ಸಾಲ ಇರುತ್ತದೆ. ಅರ್ಧ ವರ್ಷಾಂತ್ಯದಲ್ಲಿ 539 ಕೋ.ರೂ. ವ್ಯವಹಾರವನ್ನು ನಡೆಸಿರುತ್ತದೆ ಎಂದ ಅಧ್ಯಕ್ಷ ಸುರೇಶ್ ಲುಲಾಲ್ 2024 ಮಾ.31 ಕ್ಕೆ 987 ಕೋ.ರೂ.ವಿಗೂ ಮಿಕ್ಕಿ ವ್ಯವಹಾರ ನಡೆಸಿ 5.71 ಕೋ.ರೂ. ಅಧಿಕ ಲಾಭಗಳಿಸಿದೆಯಲ್ಲದೆ ಸದಸ್ಯರಿಗೆ ಶೇ. 17 ಲಾಭಾಂಶ ನೀಡಿದೆ. 2000 ಮೇ.6 ರಂದು ಸಂಘದ 4ನೇ ಕುಕ್ಕಾಜೆ ಶಾಖೆಯ ಆರಂಭಗೊಂಡಿದ್ದು,ಸದಸ್ಯ ಗ್ರಾಹಕರ ಸಹಕಾರದಿಂದ ಇದೀಗ ೨೫ ನೇ ವರ್ಷಾಚರಣೆಯನ್ನು ಪೂರೈಸಿರುವುದು ಸಂತಸ ತಂದಿದೆ ಎಂದು ಖುಷಿ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಸಂಘದ ಅಭಿವೃದ್ಧಿಗೆ ಶ್ರಮಿಸಿದ ಗ್ರಾಹಕರು ಮತ್ತು ಸಿಬ್ಬಂದಿಗಳನ್ನು ಹಾಗೂ ಉತ್ತಮ ವ್ಯವಹಾರ ನಡೆಸಿದ ಅಮೂಲ್ಯ ಸ್ವ-ಸಹಾಯ ಸಂಘಗಳನ್ನು ಗೌರವಿಸಲಾಯಿತು. ಶ್ರೀ ಕ್ಷೇತ್ರ ಪಣೋಲಿಬೈಲು ಕ್ಷೇತ್ರದ ಪ್ರಧಾನ ಅರ್ಚಕ ವಾಸುದೇವ ಮೂಲ್ಯರವರು ಶ್ರೀಕ್ಷೇತ್ರದ ಅನುಗ್ರಹ ಪ್ರಸಾದ ನೀಡಿ ಹಾರೈಸಿದರು.
ಅತಿಥಿಯಾಗಿದ್ದ ಮಂಚಿ ಸರಕಾರಿ ಪ್ರೌಡ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಕಾರ್ಯಧ್ಯಕ್ಷರಾದ ಗಣೇಶ್ ಐತಾಳ್ ರವರು ಮಾತನಾಡಿ ಸಂಘದ ಸ್ಥಾಪಕಾಧ್ಯಕ್ಷರಾದ ದಿ.ಡಾ. ಅಮ್ಮೆಂಬಳ ಬಾಳಪ್ಪರವರ ಒಡನಾಟವನ್ನು ಸ್ಮರಿಸಿದರು. ಶ್ರೀಕ್ಷೇತ್ರ ಪಣೋಳಿಬೈಲಿನ ಪ್ರಧಾನ ಅರ್ಚಕರಾದ ನಾರಾಯಣ ಮೂಲ್ಯ,ಮಹಾದೇವಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಮೋಹನ ನಾಯಕ್, ಕಲಾವಿದ ಮಹಾಬಲ ರೈ ನಗ್ರಿಗುತ್ತು ಸಂಸ್ಥೆಗೆ ಶುಭ ಹಾರೈಸಿದರು.
ಕುಕ್ಕಾಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಇಬ್ರಾಹಿಂ, ಕಟ್ಟಡದ ಮಾಲಕ ಜೆಪ್ರಿ ಲೂಯಿಸ್, ವಿಟ್ಲ ಕುಲಾಲ ಸಂಘದ ಅಧ್ಯಕ್ಷ ಬಿ.ಕೆ. ಬಾಬು, ರೋಹಿಣಿ ಉಮೇಶ್ ಕುಲಾಲ್ ಮಂಚಿ, ಮಂಚಿ ದ.ಕ.ಜಿ.ಹಿ.ಪ್ರಾ. ಶಾಲೆಯ ಅಧ್ಯಕ್ಷ ಅನ್ಸಾರ್, ಪಿಡಿಒ ನಿರ್ಮಲಾ, ಕುಕ್ಕಾಜೆ ಶಾಖೆಯ ಸಲಹಾ ಸಮಿತಿ ಅಧ್ಯಕ್ಷರಾದ ನಾಗೇಶ್ ಬಾಳೆಹಿತ್ಲು, ಸಲಹಾ ಸಮಿರಿ ಸದಸ್ಯ ನವೀನ್, ಸಂಘದ ಉಪಾಧಗಯಕ್ಷ ಪದ್ಮನಾಭ ವಿ., ಸಂಘದ ನಿರ್ದೇಶಕರುಗಳು ಹಾಗೂ ಮಾಜಿ ಸಲಹಾ ಸಮಿತಿ ಸದಸ್ಯರು ಮತ್ತು ಸದಸ್ಯ ಗ್ರಾಹಕರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಶಾಖಾ ವ್ಯವಸ್ಥಾಪಕಿ ಸವಿತಾ ಸ್ವಾಗತಿಸಿ, ಪ್ರಧಾನ ವ್ಯವಸ್ಥಾಪಕರಾದ ಬೋಜ ಮೂಲ್ಯ ಪ್ರಸ್ತಾವನೆಗೈದರು. ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಮೋಹನ್ಎಮ್.ಕೆ., ವಿವಿಧ ಶಾಖೆಯ ವ್ಯವಸ್ಥಾಪಕರಾದ ಕಮಲಾ, ಯಶೋಧ ಮತ್ರು ಸಿಬ್ಬಂದಿಗಳು ಸಹಕಾರ ನೀಡಿದರು. ಕು.ಆದ್ಯ ಪಿ.ಬಿ., ಕು.ವಿಂದ್ಯಾ ಪಿ.ಬಿ. ಕಾಂಜಿಲ ಪ್ರಾರ್ಥಿಸಿ, ಸುಂದರ ಮೂಲ್ಯ ವಂದಿಸಿದರೆ ಕಿರಿಯ ಸಹಾಯಕ ಶಿವರಾಮ್ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮಕ್ಕೂ ಮೊದಲು ಶಾಖೆಯಲ್ಲಿ ವೈಧಿಕ ಕಾರ್ಯಕ್ರಮ ಮತ್ತು ಶ್ರೀ ಲಕ್ಷ್ಮೀ ಪೂಜೆಯೂ ನಡೆಯಿತು.