Published On: Wed, Oct 16th, 2024

174 ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ‌

ಬಂಟ್ವಾಳ: ಪುಳಿಂಚ ಸೇವಾ ಪ್ರತಿಷ್ಠಾನ ಮಂಗಳೂರು, ಜನಕಲ್ಯಾಣ ಟ್ರಸ್ಟ್, ನಾಟಿ ರಾಮಗಿರಿ ನರಿಕೊಂಬು ಇದರ ಸಹಭಾಗಿತ್ವದಲ್ಲಿ ಶಂಭೂರು ಶ್ರೀ ರಾಮಾಂಜನೆಯ ವ್ಯಾಯಾಮ ಶಾಲೆಯಲ್ಲಿ ನಡೆದ  ನೇತ್ರಾ ತಪಾಸಣಾ ಚಿಕಿತ್ಸೆಯಲ್ಲಿ 174 ಫಲಾನುಭವಿಗಳಿಗೆಉಚಿತ ಕನ್ನಡಕವನ್ನು ವಿತರಿಸಲಾಯಿತು.

ಶಂಭೂರು ವ್ಯಾಯಾಮ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪುಳಿಂಚ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಧರ ಶೆಟ್ಟಿ ಪುಳಿಂಚ ಅವರು ಕನ್ನಡಕವನ್ನು ವಿತರಿಸಿದರು. ಪ್ರಸಾದ್ ನೇತ್ರಾಲಯದ ನಿಶ್ಚಿತ್ ಶೆಟ್ಟಿಯವರು ಕನ್ನಡಕವನ್ನು ಉಪಯೋಗಿಸುವ ಕ್ರಮಗಳನ್ನು ತಿಳಿಸಿದರು.


ವ್ಯಾಯಾಮ ಶಾಲಾ ಅಧ್ಯಕ್ಷ ಆನಂದ ಎ.ಶಂಭೂರು, ಕಮಾಲಾಕ್ಷ .ಯಸ್,   ಕೇಶವ ಬಿ., ಜಗದೀಶ ಕೆ, ಪ್ರಶಾಂತ, ಸದಾನಂದ, ಅಶೋಕ್, ಸಂಪತ್, ಮಹಾಬಲ ಕಲ್ಲಡ್ಕ ಉಪಸ್ಥಿತರಿದ್ದರು.  

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter