ಮಂಗಳೂರು: ಸೌಹಾರ್ದತೆಗೆ ಸಾಕ್ಷಿಯಾದ ಸಂಘನಿಕೇತನದ ಗಣೇಶೋತ್ಸವ; ಕ್ರೈಸ್ತ ಧರ್ಮಿಯರಿಂದ ಗಣೇಶನಿಗೆ ವಿಶೇಷ ಪೂಜೆ

ಮಂಗಳೂರಿನ ಸಂಘನಿಕೇತನದಲ್ಲಿ 77 ನೇ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕ್ರೈಸ್ತ ಧರ್ಮದ ಬಂಧುಗಳು ಗಣೇಶೋತ್ಸವದಲ್ಲಿ ಭಾಗಿಯಾಗಿದ್ದು, ಸೌಹಾರ್ದತೆಯ ಸಾಕ್ಷಿಯಾಗಿದೆ.
ಹೌದು, ಕಳೆದ 77 ವರ್ಷಗಳಿಂದ ಇಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆರ್ಎಸ್ಎಸ್ನ ಮಂಗಳೂರು ಕಚೇರಿಯಲ್ಲಿ ಈ ಬಾರಿ ಸೆ.11ರ ವರೆಗೆ ಐದು ದಿನಗಳ ಕಾಲ ಗಣೇಶೋತ್ಸವವು ನಡೆಯುತ್ತಲಿದೆ. ಕಳೆದ ಹತ್ತು ವರ್ಷಗಳಿಂದ ಸಂಘನಿಕೇತನ ಗಣೇಶೋತ್ಸವಕ್ಕೆ ಕ್ರೈಸ್ತ ಧರ್ಮಿಯರು ಆಗಮಿಸುತ್ತಿದ್ದು, ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯಿಂದ ಸಾಮರಸ್ಯದ ಭೇಟಿಯಾಗಿದೆ.
ಗಣೇಶನ ದರ್ಶನಕ್ಕೆ ಫಲ-ಪುಷ್ಪ ಹಿಡಿದುಕೊಂಡು ಆಗಮಿಸಿದ ಕ್ರೈಸ್ತ ಧರ್ಮಿಯರು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕ್ರೈಸ್ತ ಧರ್ಮದ ಬಂಧುಗಳನ್ನು ಗಣೇಶೋತ್ಸವ ಸಮಿತಿಯ ಪ್ರಮುಖರು ಸ್ವಾಗತಿಸಿದ್ದಾರೆ.



