Published On: Mon, Sep 9th, 2024

ಮಂಗಳೂರು: ಸೌಹಾರ್ದತೆಗೆ ಸಾಕ್ಷಿಯಾದ ಸಂಘನಿಕೇತನದ ಗಣೇಶೋತ್ಸವ; ಕ್ರೈಸ್ತ ಧರ್ಮಿಯರಿಂದ ಗಣೇಶನಿಗೆ ವಿಶೇಷ ಪೂಜೆ

ಮಂಗಳೂರಿನ ಸಂಘನಿಕೇತನದಲ್ಲಿ 77 ನೇ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕ್ರೈಸ್ತ ಧರ್ಮದ ಬಂಧುಗಳು ಗಣೇಶೋತ್ಸವದಲ್ಲಿ ಭಾಗಿಯಾಗಿದ್ದು, ಸೌಹಾರ್ದತೆಯ ಸಾಕ್ಷಿಯಾಗಿದೆ.

ಹೌದು, ಕಳೆದ 77 ವರ್ಷಗಳಿಂದ ಇಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆರ್​ಎಸ್​ಎಸ್​ನ ಮಂಗಳೂರು ಕಚೇರಿಯಲ್ಲಿ ಈ ಬಾರಿ ಸೆ.11ರ ವರೆಗೆ ಐದು ದಿನಗಳ‌ ಕಾಲ ಗಣೇಶೋತ್ಸವವು ನಡೆಯುತ್ತಲಿದೆ. ಕಳೆದ ಹತ್ತು ವರ್ಷಗಳಿಂದ ಸಂಘನಿಕೇತನ ಗಣೇಶೋತ್ಸವಕ್ಕೆ ಕ್ರೈಸ್ತ ಧರ್ಮಿಯರು ಆಗಮಿಸುತ್ತಿದ್ದು, ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯಿಂದ ಸಾಮರಸ್ಯದ ಭೇಟಿಯಾಗಿದೆ.
ಗಣೇಶನ ದರ್ಶನಕ್ಕೆ ಫಲ-ಪುಷ್ಪ ಹಿಡಿದುಕೊಂಡು ಆಗಮಿಸಿದ ಕ್ರೈಸ್ತ ಧರ್ಮಿಯರು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕ್ರೈಸ್ತ ಧರ್ಮದ ಬಂಧುಗಳನ್ನು‌ ಗಣೇಶೋತ್ಸವ ಸಮಿತಿಯ ಪ್ರಮುಖರು ಸ್ವಾಗತಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter