ಇರ್ವತ್ತೂರು : 18ನೇ ವರ್ಷದ ಗಣೇಶೋತ್ಸವಕ್ಕೆ ಚಾಲನೆ
ಬಂಟ್ವಾಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇರ್ವತ್ತೂರು ಇದರ 18ನೇ ವರ್ಷದ ಗಣೇಶೋತ್ಸವ ಇರ್ವತ್ತೂರು ಗಣೇಶನ ಕಟ್ಟೆಯ ಬಳಿ ನಡೆಯಿತು .ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ರಾಮಕೃಷ್ಣ ಎಸ್ ಅವರು ಧ್ವಜಾರೋಹಣವನ್ನು ನೇರವೆರಿಸಿದರು.

ಇರ್ವತ್ತೂರು ಗ್ರಾ.ಪಂ ಅಧ್ಯಕ್ಷೆ ಮಾಲತಿ ಅವರು ಆಟೋಟ ಸ್ಪರ್ಧೆ ಹಾಗೂ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ನಿಶ್ಚಿತ್ ಶೆಟ್ಟಿ ಮಜಲು,ಗೌರವಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಇರ್ವತ್ತೂರು, ದೇವಪ್ಪ ಶೆಟ್ಟಿ ಕುಂಟಜಾಲು,ಸೋಮಣ್ಣಗೌಡ, ಇರ್ವತ್ತೂರು ಗ್ರಾ.ಪಂ ಸದಸ್ಯರಾದ ಸುಧೀಂದ್ರ ಶೆಟ್ಟಿ ಎರ್ಮೆನಾಡು,ಪ್ರಶಾಂತ್ ಜೈನ್ ಸೇವಾ, ವಿಜಯ ಶೆಟ್ಟಿ ಇರ್ವತ್ತೂರು, ದಯಾನಂದ ಎರ್ಮೆನಾಡು, ಸಮಿತಿಯ ಸದಸ್ಯರಾದ ಸತೀಶ್ ಕರ್ಕೆರ,ಗಂಗಯ್ಯ ಡಿ.ಎನ್,ಸಂಜೀವ ಡಿ.ಎನ್,ಆನಂದ ದೊಡ್ಡಕೆರೆ,ಸುಧಾಕರ,ಶ್ರೀಧರ, ಯತೀಶ್ ಸೇವಾ,ಶಿವಾನಂದ ಉಪಸ್ಥಿತರಿದ್ದರು.