Published On: Fri, Jul 26th, 2024

ಬಂಟ್ವಾಳ : ಆ.11ರಂದು ಮಡಿವಾಳರ ಜಿಲ್ಲಾ ಮಟ್ಟದ ‘ಕೆಸರ್ ಡೊಂಜಿ ದಿನ -2024’

ಬಂಟ್ವಾಳ:  ತಾಲೂಕು ಮಡಿವಾಳ ಸಮಾಜ ಸೇವಾ ಸಂಘ , ಮಡಿವಾಳ ಯುವ ಬಳಗ ಬಂಟ್ವಾಳ ಮತ್ತು  ಮಹಿಳಾ ಘಟಕ ಇದರ ಆಶ್ರಯದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಸಹಕಾರದೊಂದಿಗೆ
ಬಿ.ಸಿ. ರೋಡ್ ನ  ಸ್ಪರ್ಶಾ ಕಲಾ ಮಂದಿರದ ಕೆಸರು ಗದ್ದೆಯಲ್ಲಿ ಆ.11 ನಡೆಯುವ  “ಕೆಸರ್ ಡೊಂಜಿ  ದಿನ -2024”  ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.


ತಾಲೂಕು ಸಂಘ ಗೌರವಾಧ್ಯಕ್ಷರಾದ ಎನ್.ಕೆ ಶಿವ ಖಂಡಿಗ ,ಅಧ್ಯಕ್ಷ  ಹರೀಶ್ ಮಂಕುಡೆ ಅಮಂತ್ರಣಪತ್ರ ಬಿಡುಗಡೆಗೊಳಿಸಿದರು.


ಕಾರ್ಯದರ್ಶಿ ಜಗದೀಶ್ ಖಂಡಿಗ, ದ.ಕ ಜಿಲ್ಲಾ ಸಂಘದ ಕಾರ್ಯದರ್ಶಿ ರಾಮ ಮಂಕುಡೆ,ಯುವ ಬಳಗದ ಅಧ್ಯಕ್ಷ ಸಂದೇಶ್ ಕೊಯಿಲ,ಕಾರ್ಯದರ್ಶಿ ವಕ್ಷಿತ್ ಇನೋಳಿ,ಮಹಿಳಾ ಘಟಕ ಅಧ್ಯಕ್ಷೆ ಶೋಭಾ ಪಂಜಿಕಲ್ಲು, ಗೌರವ ಸಲಹೆಗಾರರಾದ ಸೋಮಪ್ಪ ಮಾಸ್ಟರ್ ರಾಯಿ, ಸುಧಾಕರ ಬಿ.ಸಿ.ರೋಡ್, ಪುಷ್ಪರಾಜ್ ಕುಕ್ಕಾಜೆ, ಯೋಗೀಶ್ ಕಲಸಡ್ಕ, ಎಮ್.ಜಿ ನವೀನ್ ಕಂದೂರು, ಸುಂದರ ಪೆರಾಜೆ,ವೆಂಕಟೇಶ ಅನಂತಾಡಿ ಇದ್ದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಮಡಿವಾಳ ಸಮಾಜ ಬಾಂಧವರು ಈ  ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಕಟಣೆ ಕೋರಿದೆ. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter