ಬಂಟ್ವಾಳ: ತಾಲೂಕಿನ ಅಮ್ಟೂರು  ಶ್ರೀಕೃಷ್ಣ ಮಂದಿರದ ೨೫ನೇ ವರ್ಷದ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ‌ ಆಯೋಜಿಸಲಾದ  ೨೫ ಕಾರ‍್ಯಕ್ರಮಗಳ ಪೈಕಿ ೧೩ನೇ ಕಾರ್ಯಕ್ರಮವಾಗಿ ಸಸಿ ನಾಟಿ ಮತ್ತು  ವಿತರಣಾ ಕಾರ್ಯಕ್ರಮ ನಡೆಯಿತು. 

ಕಾರ‍್ಯಕ್ರಮದ ಪ್ರಯುಕ್ತ ಮಂದಿರದ ಸುತ್ತ ಮುತ್ತ ಸಸಿಗಳನ್ನು ನಾಟಿಮಾಡಲಾಯಿತಲ್ಲದೆ , ಭಾಗವಹಿಸಿದ ಎಲ್ಲರಿಗೂ ಸಸಿಗಳನ್ನು ವಿತರಿಸಿ ತಮ್ಮ ತಮ್ಮ ಮನೆಗಳಲ್ಲಿಯು ಸಸಿಗಳನ್ನು ನೆಟ್ಟು,ಬೆಳೆಸಲು ಪ್ರೇರಣೆ ನೀಡಲಾಯಿತು. 

ಈ ಸಂದರ್ಭ ಮಂದಿರದ ಅಧ್ಯಕ್ಷರಾದ ರಮೇಶ್ ಕರಿಂಗಾಣ,  ಉಪಾಧ್ಯಕ್ಷರುಗಳಾದ ಶರತ್ ಕುಮಾರ್, ಮಹಾಬಲ ಕುಲಾಲ್,  ಕಾರ್ಯದರ್ಶಿ ಕುಶಾಲಪ್ಪ ಅಮ್ಟೂರು ಹಾಗು ಇತರ ಪದಾಧಿಕಾರಿಗಳು, ಸದಸ್ಯರು, ಧರ್ಮಸ್ಥಳ ಸ್ವಸಹಾಯ ಸಂಘದ ಮೇಲ್ವಿಚಾರಕಿ ವನಿತಾ ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *