ದ. ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ೧,೦೧,೩೦,೪೮೦ ಕೋ.ರೂ.ಲಾಭ : ಸುಭಾಶ್ಚಂದ್ರ ಜೈನ್
ಬಂಟ್ವಾಳ: ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ., ಬಂಟ್ವಾಳವು ವ್ಯವಹಾರಿಕ ೨೦ ವರ್ಷವನ್ನು ಪೂರೈಸಿದ್ದು, ೨೦೨೩-೨೪ ನೇ ಸಾಲಿನಲ್ಲಿ ಸುಮಾರು ೩೩೦ ಕೋಟಿ ರೂ. ವ್ಯವಹಾರ ನಡೆಸಿ, ೧,೦೧,೩೦,೪೮೦ ಕೋ.ರೂ.ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಸುಭಾಶ್ಚಂದ್ರ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರಂಭದಲ್ಲಿ ಬಂಟ್ವಾಳ ತಾಲೂಕಿಗೆ ಮಾತ್ರ ಸೀಮಿತವಾಗಿದ್ದ ಸಂಘದ ಕಾರ್ಯವ್ಯಾಪ್ತಿಯನ್ನು ಕಳೆದ ವರ್ಷದಿಂದ ದ.ಕ. ಜಿಲ್ಲೆಯ ಸುಳ್ಯ ತಾಲೂಕನ್ನು ಹೊರತುಪಡಿಸಿ ಇಡೀ ಜಿಲ್ಲೆಯನ್ನು ಹೊಂದಿದೆ. ಇದೀಗ ದ.ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ., ಬಂಟ್ವಾಳ ನಾಮಾಂಕಿತದೊಂದಿಗೆ ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೨೦೨೩-೨೪ ನೇ ಅವಧಿ ಈ ಸಂಸ್ಥಗೆ ಮಹತ್ತರ ವರ್ಷವಾಗಿದ್ದು, ಈ ವರ್ಷದಲ್ಲಿ ವಿಂಶತಿ ಸಂಭ್ರಮ ಕಾರ್ಯಕ್ರಮ ಆಚರಿಸಲಾಗುತ್ತಿದೆ.
ಕಳೆದ ಮಾರ್ಚ್ ಅಂತ್ಯಕ್ಕೆ ಸುಮಾರು ೬೧.೧೩ ಕೋಟಿ ರೂ. ಠೇವಣಿ ಹಾಗೂ ೧.೫೬ ಕೋಟಿ ರೂ. ಪಾಲು ಬಂಡವಾಳ ಹಾಗೂ ಇತರ ನಿಧಿಗಳು ಸೇರಿ ಒಟ್ಟು ೬೬ ಕೋಟಿ ರೂ. ದುಡಿಯುವ ಬಂಡವಾಳ ಹೊಂದಿರುತ್ತದೆ. ಈಗಾಗಲೇ ವಿತರಿಸಿದ ಸಾಲದಲ್ಲಿ ವರ್ಷಖೈರಿಗೆ ಸಾಲದ ಮೊತ್ತ ೫೫.೪೪ ಕೋಟಿ ರೂ. ಇರುತ್ತದೆ. ಕಳೆದ ವರ್ಷಕ್ಕೆ ವ್ಯವಹಾರವನ್ನು ಹೋಲಿಸಿದರೆ ಶೇ. ೧೬.೬ ವೃದ್ದಿಯಾಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೨೦೦೩-೦೪ ರಲ್ಲಿ ಸ್ಥಾಪನೆಯಾದ ಸಂಸ್ಥೆ ಬಂಟ್ವಾಳ ತಾಲೂಕಿನಲ್ಲಿ ೧೧ ಮತ್ತು ಮೂಡಬಿದ್ರೆಯ ಅಲಂಗಾರು, ಬೆಳ್ತಂಗಡಿಯ ಕಲ್ಲೇರಿಯಲ್ಲಿ ಸೇರಿ ಒಟ್ಟು ೧೩ ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ ಮಾವಿನಕಟ್ಟೆ ಶಾಖೆ ಹಾಗೂ ಬೆಂಜನಪದವು ಶಾಖೆ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.ಸಂಸ್ಥೆಯಲ್ಲಿ ೬೭೦೯ ‘ಎ’ತರಗತಿ ಸದಸ್ಯರು ಹಾಗೂ ೨೦,೦೦೦ ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿ ವ್ಯವಹಾರ ನಡೆಸುತ್ತಿದೆ ಎಂದು ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಸ್ಥೆಯಲ್ಲಿ ೩೪ ಜನ ಸಿಬ್ಬಂದಿಗಳು ಕರ್ತವ್ಯವನ್ನು ದಕ್ಷತೆಯಿಂದ ನಿರ್ವಹಿಸುತ್ತಿದ್ದಾರೆ. ೧೬ ಜನ ನಿರ್ದೇಶಕ ಮಂಡಳಿ ಸದಸ್ಯರಿದ್ದು ಮಾರ್ಗದರ್ಶನ ನೀಡುತ್ತಿದ್ದಾರೆ. ಉಪಾಧ್ಯಕ್ಷರಾಗಿ ಮಂಜುನಾಥ ರೈ, ನಿರ್ದೇಶಕರುಗಳಾಗಿ ಸ್ವಪ್ನಾ ರಾಜರತ್ನ, ರಾಜೇಶ್ ಬಿ., ಜೆ. ಗಜೇಂದ್ರ ಪ್ರಭು, ದಿವಾಕರ ದಾಸ್, ವಿಜಯ ಕುಮಾರಿ ಇಂದ್ರ, ಸುಧಾಕರ ಸಾಲ್ಯಾನ್, ಮೈಕಲ್ ಡಿ’ಕೋಸ್ತಾ, ಹೇಮಂತ್ ಕುಮಾರ್ ಜೈನ್, ರವೀಂದ್ರ, ನಾರಾಯಣ ಸಿ. ಪೆರ್ನೆ, ಡಾ| ಸುದೀಪ್ ಕುಮಾರ್, ಲೋಕೇಶ್ ಸುವರ್ಣ, ಬಟ್ಯಪ್ಪ ಶೆಟ್ಟಿ, ಜಯರಾಜ್ ಹಾಗೂ ಮುಖ್ಯಕಾರ್ಯ ನಿರ್ವಹಣಾಧಿಕಾರಿಯಾಗಿ ಅಜಿತ್ ಕುಮಾರ್ ಜೈನ್ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.