ಅನಿ ಚಾರಿಟೇಬಲ್ ಫೌಂಡೇಶನ್®️ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ
ಮಂಗಳೂರು: ಹಲವಾರು ವಿನೂತನ ಕಾರ್ಯಕ್ರಮಗಳ ಮೂಲಕ ಸೇವಾ ರಂಗದಲ್ಲಿ ಜನ ಮನ್ನಣೆ ಪಡೆದ ಅಬ್ದುಲ್ ಲತೀಫ್ ಗುರುಪುರ ನೇತೃತ್ವದ ಅನಿ ಚಾರಿಟೇಬಲ್ ಫೌಂಡೇಶನ್®️ ವತಿಯಿಂದ ಏಪ್ರಿಲ್ 21 ಆದಿತ್ಯವಾರ ನಾಳೆ ಹತ್ತು ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಉಚ್ಚಿಲ ಸೋಮೇಶ್ವರ ಕಿಯಂಝಾ ಗಾರ್ಡನ್ ನಲ್ಲಿ ನಡೆಯಲಿದೆಯೆಂದು ಸಂಘಟಕರು ಪತ್ರಿಕಾ ಹೇಳಿಕೆಗೆ ತಿಳಿಸಿದ್ದಾರೆ.
ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಹಲವಾರು ಉಲಮಾ, ಉಮರಾ ಶಿರೋಮಣಿಗಳು ಭಾಗವಹಿಸಲಿದ್ದಾರೆ.
5:30ಕ್ಕೆ ನಿಖಾಹ್ ಕಾರ್ಯಕ್ರಮ ಮತ್ತು ಮಗ್ರಿಬ್ ನಮಾಝಿನ ಬಳಿಕ ದಫ್ ಪ್ರದರ್ಶನ ನಡೆಯಲಿದೆಯೆಂದು ಸಂಘಟಕರು ತಿಳಿಸಿದರು.
ಲತೀಫ್ ಗುರುಪುರ ಹಲವಾರು ಕಾರುಣ್ಯ ಸೇವೆ ಮಾಡುತ್ತಿದ್ದು ಇತ್ತೀಚೆಗೆ ಅವರು ಸೂರಿಲ್ಲದವರಿಗೆ ಆಸರೆ ಯೋಜನೆ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿ ಕೊಡುತ್ತಿದ್ದಾರೆ.