Published On: Mon, Nov 13th, 2023

ಕಲ್ಲಡ್ಕ : ಆಟೋಟ ಸ್ಪರ್ಧೆ ಹಾಗೂ ಗುರು ಪೂಜಾ ಕಾರ್ಯಕ್ರಮದ ಪೂರ್ವಭಾವಿ ಸಭೆ

ಬಂಟ್ವಾಳ: ಬಿಲ್ಲವ ಸಮಾಜ ಸೇವಾ ಸಂಘ ಕಲ್ಲಡ್ಕ ವಲಯದ ಆಶ್ರಯದಲ್ಲಿ ನಡೆಯಲಿರುವ ಆಟೋಟ ಸ್ಪರ್ಧೆ ಹಾಗೂ ಗುರುಪೂಜಾ ಕಾಯ೯ಕ್ರಮದ ಬಗ್ಗೆ ಪೂರ್ವಭಾವಿ ಸಭೆ ಸಂಘದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಕೆಪುಲಕೋಡಿ ಇವರ ಅಧ್ಯಕ್ಷತೆಯಲ್ಲಿ ಕಲ್ಲಡ್ಕದಲ್ಲಿ ನಡೆಯಿತು.

ಡಿಸೆಂಬರ್ 10 ರಂದು ಕಲ್ಲಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಕ್ರೀಡಾಕೂಟವನ್ನು ಹಾಗೂ ಡಿಸೆಂಬರ್ 24 ರಂದು ಕಲ್ಲಡ್ಕ ಪಂಚವಟಿಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಶ್ರೀ ನಾರಾಯಣ ಗುರುಗಳ ಗುರು ಪೂಜಾ ಕಾರ್ಯಕ್ರಮ ನಡೆಯಲಿದ್ದು, ಸದಸ್ಯರು ಸಂಪೂರ್ಣ ಸಹಕಾರ ನೀಡಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ಸಭೆಯಲ್ಲಿ ಕೋರಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಹೊಸಕಟ್ಟ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಅಣ್ಣು ಪೂಜಾರಿ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ್ ಬಂಗೇರ, ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ನಾರುಕೋಡಿ, ಕಲ್ಲಡ್ಕ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪ ದೇವಸ್ಯ, ಬಿಲ್ಲವ ಪ್ರಮುಖರಾದ ಚೆನ್ನಪ್ಪ ಕೋಟ್ಯಾನ್ ತೋಟ, ಜಯಪ್ರಕಾಶ್ ತೆಕ್ಕಿಪಾಪು, ಮಾಧವ ಸಾಲಿಯಾನ್ ಕುದ್ರಬೆಟ್ಟು, ಶ್ರೀಧರ ಅಮ್ಟೂರು, ಶಿವಾನಂದ ಎಳ್ತೀಮಾರ್, ಸಂತೋಷ್ ಕುಮಾರ್ ಬೊಳ್ಪೋಡಿ, ಶೇಖರ್ ದಾಸಕೋಡಿ, ಬಿ ಆರ್ ಜಯಪ್ರಶಾಂತ್, ಸುಧಾಕರ್ ವೀರಕಂಭ, ಮೋಹನ್ ದಾಸ್ ಪಾದೆ, ಸತೀಶ್ ಕುಮಾರ್ ಬಾಯಿಲ, ಮೋಹನ್ ನರಹರಿನಗರ್, ಜಯಂತ್ ಕಟ್ಟೆಮಾರ್, ಪ್ರದೀಪ್ ಶಾಂತಿಪಳಿಕೆ, ರೋಹಿಣಿ ಸುಧೆಕಾರ್, ಲಾವಣ್ಯ ಕುಂಟಿಪಾಪು, ಸುಧಾ ಸುಧೆಕಾರ್, ಸುಜಾತ ಪೂರ್ಲಿಪಾಡಿ, ಮೊದಲಾದವರು ಉಪಸ್ಥಿತರಿದ್ದರು. ಯೋಗೀಶ್ ತೋಟ ಸ್ವಾಗತಿಸಿ, ಲೋಕೇಶ್ ಶಾಂತಿಪಳಿಕೆ ವಂದಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter