Published On: Fri, Sep 22nd, 2023

ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಪೋಷಣ್ ಮಾಸಾಚರಣೆ ಕಾರ್ಯಕ್ರಮ

ಬಂಟ್ವಾಳ: ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ  ಪೋಷಣ್ ಮಾಸಾಚರಣೆ  ಕಾರ್ಯಕ್ರಮವು ಕೆಂಪುಗುಡ್ಡೆ ಅಂಬೇಡ್ಕರ್ ಭವನದಲ್ಲಿ  ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ್ ಕುಮಾರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.

ಅತಿಥಿಯಾಗಿದ್ದ ಶಾಲಾ ಮುಖ್ಯೋಪಾಧ್ಯಾಯ ಆರಾಧ್ಯ ಅವರು  ಸ್ಥಳೀಯ ವಸ್ತುಗಳಿಂದ ತಯಾರಿಸಿದ ಆಹಾರಗಳು ನಮ್ಮ ಆರೋಗ್ಯವನ್ನು  ಹೇಗೆ ಸುಧಾರಿಸಬಹುದು ಎಂದು ಮಾಹಿತಿ ನೀಡಿದರು.ಕಚೇರಿ ಸಿಬ್ಬಂದಿ  ಸುಂದರಿ ಅವರು ಪೋಷಣ್ ಮಾಸಾಚರಣೆ ಉದ್ದೇಶವನ್ನು ವಿವರಿಸಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮೋಹಿನಿ,ಪಂಚಾಯತ್ ಸದಸ್ಯರಾದ ಸುನೀಲ್ ಕುಮಾರ್,ಪ್ರಕಾಶ್,ಚಂದ್ರಾವತಿ,ಪೂರ್ಣಿಮಾ,ಸಮುದಾಯ ಆರೋಗ್ಯ ಅಧಿಕಾರಿ ಶಿವಪ್ರಸಾದ್,ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ,ಆಶಾ,ಅಂಗನವಾಡಿ ಕಾರ್ಯಕರ್ತೆಯರು,ಮಕ್ಕಳ ಪೋಷಕರು, ಸ್ತ್ರೀಶಕ್ತಿ ಸದಸ್ಯರು,ಎಂ.ಬಿ.ಕೆ‌ ಸವಿತ ಉಪಸ್ಥಿತರಿದ್ದರು.

ಹಿರಿಯ ಮೇಲ್ವೀಚಾರಕಿ ಗುಣವತಿ‌ ‌ಸ್ವಾಗತಿಸಿ,ಅಂಗನವಾಡಿ ಕಾರ್ಯಕರ್ತೆ ಪ್ರೇಮಲತಾ ನಿರೂಪಿಸಿದರು,ಅಂಗನವಾಡಿ ಕಾರ್ಯಕರ್ತೆ ಪ್ಲೇವಿ  ಡಿಸೋಜ ವಂದಿಸಿದರು.
ಸುಮಾರು 60 ಬಗೆಯ ವಿವಿಧ ಪೌಷ್ಟಿಕ ಆಹಾರಗಳನ್ನು ತಯಾರಿಸಿ ಪ್ರದರ್ಶಿಸಲಾಯಿತು 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter