Published On: Mon, Sep 18th, 2023

ಪೌಷ್ಟಿಕ ಸಪ್ತಾಹ, ಸ್ವಸ್ತ ಬಾಲಕ ಸ್ಪರ್ಧೆ

ಬಂಟ್ವಾಳ: ಇಲ್ಲಿಗೆ ಸಮೀಪದ ಕುದ್ರೆಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಕುದ್ರೆಬೆಟ್ಟು,ಪೂರ್ಲಿಪಾಡಿ,ಕಂಠಿಕ ಅಂಗನವಾಡಿ ಕೇಂದ್ರಗಳ ಸಹಯೋಗದೊಂದಿಗೆ  ಪೋಷಣ ಅಭಿಯಾನದ ಅಂಗವಾಗಿ ಪೌಷ್ಟಿಕ ಸಪ್ತಾಹ,ಸ್ವಸ್ತ ಬಾಲಕ ಸ್ಪರ್ಧೆ,ಕಿಶೋರಿಯರಿಗೆ ರಕ್ತಹೀನತೆ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ. ಕೆ.ಅಣ್ಣು ಪೂಜಾರಿ ಅವರು ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾವತಿ ಪ್ರಾಸ್ತಾವಿಕವಾಗಿ ಮಾತನಾಡಿ ಪೋಷಣ ಮಾಸಾಚರಣೆ,ಇಲಾಖಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು,ಬಾಳ್ತಿಲ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸ್ವಸ್ತ ಬಾಲಕ ಸ್ಪರ್ಧೆ ನಡೆಸಿಕೊಟ್ಟರಲ್ಲದೆ,ರಕ್ತಹೀನತೆ ಬಗ್ಗೆ  ಮಾಹಿತಿ ನೀಡಿದರು. ಕುದ್ರೆಬೆಟ್ಟು ಶಾಲಾ ಮುಖ್ಯ ಶಿಕ್ಷಕರು,ಗ್ರಾಮ ಪಂಚಾಯತ್ ಸದಸ್ಯರು,ಬಾಲವಿಕಾಸ ಸಮಿತಿ ಅಧ್ಯಕ್ಷ,ಮಣಿಕಂಠ ಭಜನಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ರಮೇಶ್,ಸ್ತ್ರೀ ಶಕ್ತಿ ಸದಸ್ಯರು,ಪೋಷಕರು,ಅಂಗನವಾಡಿ ಮಕ್ಕಳು ಹಾಗೂ ಆಶಾ ಕಾರ್ಯಕರ್ತೆಯರು  ಹಾಜರಿದ್ದರು.

ಕಾರ್ಯಕರ್ತೆ ಉಮಾವತಿ ಸ್ವಾಗತಿಸಿ,ವಲಯ ಮೇಲ್ವಿಚಾರಕಿ ಲೀಲಾವತಿ ಕಾರ್ಯಕ್ರಮ ನಿರೂಪಿಸಿದರು,ಕಾರ್ಯಕರ್ತೆ ಸುರೇಖಾ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter