ಮಂಜಲ್ಪಾದೆ ದೇವಸ್ಥಾನದಲ್ಲಿ ಮೊಸರು ಕುಡಿಕೆ
ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಮಂಜಲ್ಪಾದೆ ನೇತ್ರಾವತಿ ಬಳಗ ಇದರ ಆಶಯದಲ್ಲಿ ಜನ್ಮಾಷ್ಟಮಿ ಪ್ರಯುಕ್ತ ಮಂಜಲ್ಪಾದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ 10ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮ ನಡೆಯಿತು.

ಇದರ ಅಂಗವಾಗಿ ಸಾರ್ವಜನಿಕರಿಗೆ ಮುಕ್ತ ವಿವಿಧ ಆಟೋಟ ಸ್ಪರ್ಧೆಯನ್ನು ಸಜೀಪ ಮಾಗಣೆ ತಂತ್ರಿಗಳಾದ ಎಂ.ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿ ಶುಭ ಹಾರೈಸಿದರು.ನೇತ್ರಾವತಿ ಬಳಗದ ಅಧ್ಯಕ್ಷ ರಾಕೇಶ್,ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ಕೇಶವ ಭಟ್.ಬಿ,ಪ್ರಮುಖರಾದ ಗಣೇಶ್ ಕುಲಾಲ,ವಾಸು ಗಟ್ಟಿ,ಜಯ ಕುಲಾಲ್, ಪ್ರಶಾಂತ್ ಗಟ್ಟಿ,ಸತೀಶ್ ಗಟ್ಟಿ,ಸುಂದರ ಪೂಜಾರಿ,ಸರಸ್ವತಿ,ನರೇಂದ್ರ ಆಳ್ವ, ಪುರಂದರ, ಸುಖೇಶ,ಪ್ರಭಾಕರ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.