Published On: Tue, Sep 5th, 2023

ನಿಕ್ಷಯಮಿತ್ರ ಯೋಜನೆಯಡಿ ಅರ್ಹ ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರದ ಕಿಟ್ ವಿತರಣೆ‌

ಬಂಟ್ವಾಳ: ನಿಕಟಪೂರ್ವ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಫರಂಗಿಪೇಟೆ ಸೇವಾಂಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಸೇವಾಂಜಲಿ ಸಭಾಗ್ರಹದಲ್ಲಿ ನಡೆದ ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಆಹಾರ ದವಸ,ಧಾನ್ಯ ವಿತರಿಸಿ ಮಾತನಾಡಿ ನಿಕ್ಷಯಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನವು ಬದ್ದತೆ ಹಾಗೂ ದೀಕ್ಷೆ ತೊಟ್ಟಂತೆ ಅರ್ಹ ಕ್ಷಯ ರೋಗಿಗಳಿಗೆ ಒಂದು ವರ್ಷದಿಂದ ಪೌಷ್ಠಿಕ  ಆಹಾರದ ಕಿಟ್ ವಿತರಿಸುವ  ಕಾರ್ಯ ಮಾಡುತ್ತಿರುವುದು ಅಭಿನಂದನೀಯ ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಸರಕಾರದ ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು  ಕೃಷ್ಣ ಕುಮಾರ್ ಪೂಂಜ ಅವರ ನೇತೃತ್ವದಲ್ಲಿ ಸೇವಾಂಜಲಿ ಪ್ರತಿಷ್ಠಾನ ನಿರಂತರವಾಗಿ ಮಾಡುತ್ತಿದೆ.ಧಾರ್ಮಿಕ,ಸಾಮಾಜಿಕ,ಸಾಂಸ್ಕೃತಿಕ,ಶೈಕ್ಷಣಿಕ,ಆರೋಗ್ಯ ಸೇವಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ಇತರ ಸಂಘ ಸಂಸ್ಥೆಗಳಿಗೆ ಆದರ್ಶ‌ ಎಂದು ಹೇಳಿದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್‌ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಕ್ಷಯರೋಗಿಗಳಿಗೆ ನೀಡುವ ಆಹಾರವನ್ನು ಅವರೇ ಸೇವಿಸಿ ಆರೋಗ್ಯವನ್ನು ಉತ್ತಮಗೊಳಿಸಬೇಕು ಎಂದು ತಿಳಿಸಿದರು.ವೇದಿಕೆಯಲ್ಲಿ ಪ್ರಮುಖರಾದ  ಸುಕೇಶ್ ಶೆಟ್ಟಿ ತೇವು,ಕೇಶವ ದೋಟ,ಇಂಜಿನಿಯರ್ ಸಮೀರ್ ಕುಮಾರ್, ಸುರೇಶ್ ರೈ ಪೆಲಪಾಡಿ, ನಾರಾಯಣ ಬೆಳ್ಚಡ ಬಡ್ಡೂರು,ಕೃಷ್ಣ ತುಪ್ಪೆಕಲ್ಲು,ಪದ್ಮನಾಭ ಕಿದೆಬೆಟ್ಟು, ಚಂದ್ರಹಾಸ ಕಡೆಗೋಳ,ದಿನೇಶ್ ಶೆಟ್ಟಿ ಕೊಟ್ಟಿಂಜ,ಪ್ರಶಾಂತ್ ತುಂಬೆ,ಮಧುರಾಜ್ ಶೆಟ್ಟಿ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter