ಅನಂತಾಡಿ ಗ್ರಾ.ಪಂ.ಅಧ್ಯಕ್ಷರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ
ಬಂಟ್ವಾಳ: ಕರ್ನಾಟಕದಲ್ಲಿ ಸರಕಾರ ಬದಲಾದಂತೆ ಬಿಟ್ಟಿ ಭಾಗ್ಯದ ಜೊತೆ ಉಚಿತ ಗೂಂಡ ಭಾಗ್ಯವೂ ಜನತೆಗೆ ಸಿಕ್ಕಿದೆ.ಗ್ರಾ.ಪಂ.ಅಧ್ಯಕ್ಷನಾದ ತನ್ನ ಮೇಲೆಯೇ ಕಾಂಗ್ರೆಸ್ ಪುಡಾರಿಗಳು ತನ್ನ ಮೇಲೆ ದಾಳಿ ಮಾಡಿ ಹಲ್ಲೆಗೈದಿದ್ದು,ಇಂತಹ ಸ್ಥಿತಿಯಲ್ಲಿ ಒರ್ವ ಜನಪ್ರತಿನಿಧಿಯಾಗಿ ಜನರ ಕೆಲಸ ಮಾಡುವುದು ಹೇಗೆ ಎಂದು ಅನಂತಾಡಿ ಗ್ರಾ.ಪಂ.ಅಧ್ಯಕ್ಷ ಗಣೇಶ್ ಪೂಜಾರಿ ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಅನಂತಾಡಿಯಲ್ಲಿ ಕಾಂಗ್ರೆಸ್ ವಲಯ ಅಧ್ಯಕ್ಷ ಸತೀಶ್ ಪೂಜಾರಿ,ಕಾರ್ಯಕರ್ತ ಸುಕೇಶ್ ಪೂಜಾರಿ ಎಂಬವರಿಂದ ಹಲ್ಲೆಗೊಳಗಾದ ಅನಂತಾಡಿ ಗ್ರಾ.ಪಂ.ಅಧ್ಯಕ್ಷಗಣೇಶ್ ಪೂಜಾರಿ ಅವರು ಬುಧವಾರ ಬಂಟ್ಚಾಳ ಪ್ರೆಸ್ ಕ್ಲಬ್ ನಲ್ಲಿ ತನ್ನ ಮೇಲಾದ ಹಲ್ಲೆಯನ್ನು ವಿವರಿಸಿ,ಇವರ ಗೂಂಡಾಗಿರಿ ವರ್ತನೆಯಿಂದ ಪರಿಸರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆಯಲ್ಲದೆ ಸಾರ್ವಜನಿಕರ ಕೆಲಸ ಮಾಡದಂತ ಸ್ಥಿತಿ ಉಂಟಾಗಿದೆ ಎಂದು ದೂರಿದರು.
ಅನಂತಾಡಿ ಗ್ರಾಮಸಭೆಯಲ್ಲಿ ಸಾರ್ವಜನಿಕರಿಂದ ಬಂದ ದೂರಿನ ಹಿನ್ನಲೆಯಲ್ಲಿ ಚರಂಡಿ ಹೂಳೆತ್ತುವ ಕಾರ್ಯದಲ್ಲಿ ತೊಡಗಿದ್ದೆ. ಹಾಗೆಯೇ ಇಲ್ಲಿನ ಬೇಬಿ ಮತ್ತು ಕುಸುಮ ಎಂಬವರ ಮನೆಯಂಗಳ ಮತ್ತು ಕೃಷಿಗೆ ನೀರು ಹೋಗಿ ತೊಂದರೆಯಾಗುತ್ತಿದೆ ಎಂದು ನೀಡಲಾದ ದೂರಿಗೆ ಸ್ಪಂದಿಸಿ ಚರಂಡಿಯ ಹೂಳೆತ್ತುವ ಕಾರ್ಯಕ್ಕಾಗಿ ಮುಂದಾಗಿದ್ದೆವು.
ಆಗ ಆರೋಪಿಗಳು ಬಂದು ಏಕಾಎಕಿ ಅವಾಚ್ಯವಾಗಿ ನಿಂದಿಸಿಲ್ಲದೆ ಹಲ್ಲೆಗೈದು ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದೆ.ಮುಂದಿನ ದಿನಗಳಲ್ಲಿ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಅಪಾದಿಸಿದ ಅವರು ತಮ್ಮ ಕೃತ್ಯ ಮುಚ್ಚಿ ಹಾಕಲು ನಮ್ಮ ವಿರುದ್ಧ ಪ್ರತಿದೂರು ನೀಡಿದ್ದಾರೆ ಎಂದರು.
ಖಂಡನೆ:
ಈ ಸಂದರ್ಭ ಉಪಸ್ಥಿತರಿದ್ದ ಅನಂತಾಡಿ ಗ್ರಾ.ಪಂ.ಅಧ್ಯಕ್ಷ ಗಣೇಶ್ ಪೂಜಾರಿ ಅವರ ಮೇಲಿನ ಹಲ್ಲೆಯನ್ನು ಗ್ರಾ.ಪಂ.ಮಾಜಿ ಅಧ್ಯಕ್ಷ ಸನತ್ ಕುಮಾರ್ ಹಾಗೂ ಶಕ್ತಿಕೇಂದ್ರದ ಸಂಚಾಲಕ ನಾಗೇಶ್ ಭಂಡಾರಿ ಅವರು ತೀವ್ರವಾಗಿ ಖಂಡಿಸಿದರಲ್ಲದೆ ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಗ್ರಾ.ಪಂ.ಉಪಾಧ್ಯಕ್ಷ ಕುಸುಮಧರ ಗೌಡ, ಬೂತ್ ಅಧ್ಯಕ್ಷ ಮಹಾಬಲ ಪೂಜಾರಿ, ಬಿಜೆಪಿ ಕಾರ್ಯಕರ್ತ ಶಶಿಕಾಂತ್ ಶೆಟ್ಟಿ ಬಾಳಿಕೆ ಉಪಸ್ಥಿತರಿದ್ದರು.
ಬಿಜೆಪಿ ಕ್ಷೇತ್ರ ಸಮಿತಿ ಖಂಡನೆ:
ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ಶ್ರೀ ಗಣೇಶ್ ಪೂಜಾರಿ ತಮ್ಮ ಕರ್ತವ್ಯದಲ್ಲಿರುವ ವೇಳೆ ಕಾಂಗ್ರೆಸ್ ಕಾರ್ಯಕರ್ತರಾದ ಸತೀಶ್ ಪೂಜಾರಿ ಹಾಗೂ ಸುಕೇಶ್ ಪೂಜಾರಿ ಮತ್ತು ತಂಡ ಏಕಾಏಕಿ ದಾಳಿ ಮಾಡಿ ಅವ್ಯಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿರುವುದನ್ನು ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ ಅವರು ಖಂಡಿಸಿದ್ದಾರೆ.