ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ). ಬಂಟ್ವಾಳ ವಲಯದ ಅಧ್ಯಕ್ಷರಾಗಿ ಕಿಶೋರ್ ಯಸ್. ಕುಮಾರ್ ಆಯ್ಕೆ
ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ. ಕ. ಮತ್ತು ಉಡುಪಿ ಜಿಲ್ಲೆಯ ಬಂಟ್ವಾಳ ವಲಯದ ಮಹಾಸಭೆ ಬಿ.ಸಿ.ರೋಡಿನ ಲಯನ್ಸ್ ಸಭಾಂಗಣದಲ್ಲಿ ಜರಗಿತು.ಈ ಸಭೆಯಲ್ಲಿ 2023-2025 ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ನೂತನ ಅಧ್ಯಕ್ಷರಾಗಿ ಕಿಶೋರ್ ಎಸ್ ಕುಮಾರ್ ಅವರು ಆಯ್ಕೆಯಾಗಿದ್ದಾರೆ.

ಪ್ರಶಾಂತ್ ಕಲ್ಲಡ್ಕ,(ಪ್ರಧಾನ ಕಾರ್ಯದರ್ಶಿ),ಹರೀಶ್ ಕುಂದರ್( ಗೌರವೌಧ್ಯಕ್ಷರು),ಲಕ್ಷ್ಮಣ್ ಮೆಲ್ಕಾರ್ , ವಿಕೇಶ್ ಬಂಟ್ವಾಳ ( ಉಪಾದ್ಯಕ್ಷರು), ವರುಣ್ ಕಲ್ಲಡ್ಕ(ಕೋಶಾಧಿಕಾರಿ),ರಿಚರ್ಡ್ ,ವಿವೇಕ್ ಅಮ್ಟಾಡಿ (ಜತೆ ಕಾರ್ಯದರ್ಶಿಗಳು),ಶರತ್ ಕಲ್ಲಡ್ಕ, (ಸಂಘಟನಾ ಕಾರ್ಯದರ್ಶಿ),ಮೋಹನ್ ಏಕದಂತ , ಹರೀಶ್ ಕನ್ಯಾನ(ಕ್ರೀಡಾ ಕಾರ್ಯದರ್ಶಿಗಳು), ಸಂತೋಷ್ ಕೊಯಿಲ (ಸಾಂಸ್ಕೃತಿಕ ಕಾರ್ಯದರ್ಶಿ), ಹರೀಶ್ ನಾಟಿ(ಮಾಧ್ಯಮ ಪ್ರತಿನಿಧಿ),ಪ್ರಸಾದ್(ಛಾಯಾ ಕಾರ್ಯದರ್ಶಿ) ಇವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ