ಫರಂಗಿಪೇಟೆಯಲ್ಲಿ ವನಮಹೋತ್ಸವ
ಬಂಟ್ವಾಳ: ನಿಟ್ಟೆ ವಿಶ್ವವಿದ್ಯಾಲಯ ದೇರಳಕಟ್ಟೆ , ಸೇವಾಂಜಲಿ ಆರೋಗ್ಯ ಕೇಂದ್ರ ಪರಂಗಿಪೇಟೆ, ಸೇವಾಂಜಲಿ ಪ್ರತಿಷ್ಠಾನ ಪರಂಗಿಪೇಟೆ ಇವರ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ಸೇವಾಂಜಲಿ ಸಭಾಂಗಣದ ಅವರಣದಲ್ಲಿ ಮಂಗಳವಾರ ನಡೆಯಿತು.
ಸೇವಾಂಜಲಿಪ್ರತಿಷ್ಠಾನ ನ ಆಡಳಿತ ಟ್ರಷ್ಟಿ ಕೃಷ್ಣ ಕುಮಾರ್ ಪೂಂಜಾರವರು ವನಮಹೋತ್ಸವದ ಮಹತ್ವವನ್ನು ತಿಳಿಸಿದರು . ಈ ಸಂದರ್ಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಕಣ್ಣಿನ ವೈದ್ಯರಾದ ಡಾ. ಹೃಷಿಕೇಶ್ ಅಮೀನ್, ಸೇವಾಂಜಲಿ ಅರೋಗ್ಯ ಕೇಂದ್ರದ ವೈದ್ಯರಾದ ಡಾ . ಚೇತನ್, ದಂತ ವೈದ್ಯರಾದ ಡಾ . ರೀಮಾ ಹಾಗೂ ಸ್ಥಳೀಯ ಗಣ್ಯರಾದ ನಾರಾಯಣ.ಬಿ.ಎಫ್., ಗಣೇಶ್ , ದಿನೇಶ್ ತುಂಬೆ, ಪ್ರಶಾಂತ್ ಬೊಳ್ಳಾರಿ, ದಿನೇಶ್ ಶೆಟ್ಟಿ ಕೊಟ್ಟಿಂಜ,ಎಂ.ಕೆ. ಖಾದರ್ ಮಾರಿಪಳ್ಳ , ಜಯ ರಾಮಲ್ ಕಟ್ಟೆ ,ಉಮೇಶ್ ಸೇಮಿತ ತುಪ್ಪೆಕಲ್ಲು , ಯಮುನ ನರಿಕೊಂಬು, ವಿದ್ಯಾ , ಗಾಯತ್ರಿ, ಮಧುರಾಜ್ ಶೆಟ್ಟಿ ಸುಜೀರು ಮತ್ತಿತ್ತರ ಉಪಸ್ಥಿತರಿದ್ದರು.
ಸುಮಾರು 150ಕ್ಕೂ ಹೆಚ್ಚು ಹಣ್ಣಿನ ಮತ್ತು ಅಮೂಲ್ಯ ಗಿಡಗಳನ್ನು ಆಸಕ್ತ ಕುಟುಂಬಗಳಿಗೆ ವಿತರಿಸಲಾಯಿತು.