Published On: Thu, Jul 13th, 2023

ಕುಲವೂರು ನಾರಾಯಣ ಪೂಜಾರಿ ನಿಧನ

ಕೈಕಂಬ : ಗುರುಪುರ ಬಿಲ್ಲವ ಸಮಾಜ ಸೇವಾ ಸಂಘದ ಸ್ಥಾಪನೆಯೊಂದಿಗೆ ಸುಮಾರು ೨೫ ವರ್ಷ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಧಾರ್ಮಿಕ ಹಾಗೂ ಶೈಕ್ಷಣಿಕ ಮುಂದಾಳು ಗುರುಪುರ ಬಡಕರೆ ನಿವಾಸಿ ಕುಲವೂರು ಎಸ್. ನಾರಾಯಣ ಪೂಜಾರಿ(೯೫) ಅವರು ಬುಧವಾರ ರಾತ್ರಿ ನಿಧನ ಹೊಂದಿದರು.

ಗುರುಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾಗಿದ್ದರು. ಬಡಕರೆ ಶ್ರೀ ಕರ‍್ದಬ್ಬು ದೈವಸ್ಥಾನ ಜೀರ್ಣೋದ್ಧಾರ ಕಾರ್ಯದೊಂದಿಗೆ ಕೈಜೋಡಿಸಿರುವ ಇವರು, ಸುಮಾರು ೪೦ ವರ್ಷಗಳ ಹಿಂದೆ ಗುರುಪುರ ಕೈಕಂಬದಲ್ಲಿ `ಮಂಜುನಾಥ’ ಸಿನೆಮಾ ಟಾಕೀಸ್ ಹೊಂದಿದ್ದರು. ಮೃತರು ಇಬ್ಬರು ಪುತ್ರರು ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ. ಗುರುವಾರ ಬೆಳಿಗ್ಗೆ ಬಡಕರೆಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter