Published On: Wed, Jul 12th, 2023

ಪೆರಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬರಹ ಪುಸ್ತಕ ವಿತರಣೆ

ಬಂಟ್ವಾಳ:  ಪೆರಾಜೆ ಗ್ರಾಮದ ಪೆರಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ದಾನಿಗಳ ನೆರವಿನಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಬರಹ ಪುಸ್ತಕವನ್ನು ವಿತರಿಸಲಾಯಿತು.


ಬಿ.ಸಿ.ರೋಡಿನ ನ್ಯಾಯವಾದಿ ಶೋಭಲತಾ ಸುವರ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮೋನಪ್ಪ ಸಾಲಿಯಾನ್ ಅಬ್ಬೆಮಾರು ಅಧ್ಯಕ್ಷತೆ ವಹಿಸಿದ್ದರು.


ಬಂಟ್ವಾಳ ವಕೀಲರ ಸಂಘದ ಮಾಜಿ ಅಧ್ಯಕ್ಷ  ಉಮೇಶ್ ಕುಮಾರ್ ವೈ , ದೇಜಪ್ಪ ಪೂಜಾರಿ ಗುರುದೇವ್ ಬಡೆಕೋಡಿ,   ಸತೀಶ್ ನಾಯ್ಕ್  ಮಲೇಷ್ಯಾ, ಹರೀಶ್ ಮಂಜೊಟ್ಟಿ , ಗ್ರಾಮ  ಪಂಚಾಯತ್ ಸದಸ್ಯರಾದ ಹರೀಶ್ ರೈ ಪಾನೊರು ವೇದಿಕೆಯಲ್ಲಿದ್ದರು.

ಶಾಲಾ ಮುಖ್ಯೋಪಾಧ್ಯಾಯರಾದ ಪುಟ್ಟ ರಂಗನಾಥ್ ರವರು ಸ್ವಾಗತಿಸಿ ವಂದಿಸಿದರು.ಯುವ ನ್ಯಾಯವಾದಿ  ದೀಪಕ್ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.  

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter