Published On: Mon, Jun 19th, 2023

ನಿರಂತರ ಅಭ್ಯಾಸ ಮಾಡಿದಾಗ ಒಳ್ಳೆಯ ಕಲಾವಿದರಾಗಬಹುದು ಸಾಧ್ಯ: ಯಕ್ಷಗುರು ಅಶ್ವಥ್ ಕುಲಾಲ್

ಬಂಟ್ವಾಳ : ಯಾವುದೇ ಕಲೆಯನ್ನು ಶ್ರಮಪಟ್ಟು ನಿರಂತರ ಅಭ್ಯಾಸ ಮಾಡಿದಾಗ  ಒಳ್ಳೆಯ ಕಲಾವಿದರಾಗಬಹುದು ಸಾಧ್ಯ. ಯಕ್ಷಗಾನದಲ್ಲಿ ಅಭ್ಯಾಸ ಮಾಡಿದಷ್ಟು ಕಲಿಯಬಹುದಾಗಿದ್ದು, ಪ್ರಸ್ತುತ ದಿನಗಳಲ್ಲಿ ಯಕ್ಷಗಾನ ಕಲಾವಿದರಿಗೆ ಸಾಕಷ್ಟು ವೇದಿಕೆಗಳು ನಿರ್ಮಾಣವಾಗಿದೆ ಎಂದು ಕಟೀಲು ಮೇಳದ ಕಲಾವಿದ, ಯಕ್ಷಗುರು ಅಶ್ವಥ್ ಕುಲಾಲ್ ಮಂಜನಾಡಿ ತಿಳಿಸಿದರು.


ಬಿ.ಸಿ.ರೋಡಿನ  ಕುಲಾಲ ಸಮುದಾಯ ಭವನದಲ್ಲಿ  ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿ ಕುಲಾಲ ಸೇವಾದಳದ ವತಿಯಿಂದ ನಡೆದ ಯಕ್ಷನಾಟ್ಯ ಕಲಿಕಾ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿ ಕುಲಾಲ ಸಮುದಾಯದಲ್ಲಿ  ಮುಂದಿನ ದಿನಗಳಲ್ಲಿ ಪ್ರತೀ ಮನೆಯಲ್ಲೂ ಒಳ್ಳೆಯ ಯಕ್ಷಗಾನ ಕಲಾವಿದರು ಮೂಡಿಬರಲಿ ಎಂದು ಅಶಿಸಿದರು.


ಕುಲಾಲ ಸೇವಾದಳಪತಿ ಯಾದವ ಅಗ್ರಬೈಲು, ಕಾರ್ಯದರ್ಶಿ ಗಣೇಶ್ ಕುಲಾಲ್ ಬೆದ್ರಗುಡ್ಡೆ, ಕಿಶೋರ್ ಕುಲಾಲ್ ರಾಜೀವಪಳಿಕೆ ಉಪಸ್ಥಿತರಿದ್ದರು.ರಾಜೇಶ್ ಕುಲಾಲ್ ರಾಯಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಯಂತ್ ಅಗ್ರಬೈಲು ವಂದಿಸಿದರು. ತಾರನಾಥ ಮೊಡಂಕಾಪು, ದೇವದಾಸ ಅಗ್ರಬೈಲು, ದರ್ಶನ್ ಮೊಡಂಕಾಪು, ಚಿರಾಗ್ ಮಯ್ಯರಬೈಲು, ರಾಜೇಶ್ ಭಂಡಾರಿಬೆಟ್ಟು, ರಾಘವೇಂದ್ರ ಮೈರಾನ್ಪಾದೆ  ಕಾರ್ಯಕ್ರಮಕ್ಕೆ ಸಹಕರಿಸಿದ್ದರು. ಸುಮಾರು ನಲುವತ್ತು ವಿದ್ಯಾರ್ಥಿಗಳು ನಾಟ್ಯ ಕಲಿಕೆಗೆ ಸೇರ್ಪಡೆಗೊಂಡರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter