ಮಾರ್ನಬೈಲ್ ಶ್ರೀ ಚಾಮುಂಡೇಶ್ವರೀ ಕ್ಷೇತ್ರದಲ್ಲಿ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶ
ಬಂಟ್ವಾಳ: ಸಜೀಪಮುನ್ನೂರು ಮಾರ್ನಬೈಲು ನಾಗನವಲಚ್ಚಿಲ್ ಶ್ರೀ ಚಾಮುಂಡೇಶ್ವರೀ ಕ್ಷೇತ್ರದಲ್ಲಿ ಮಾ. ೨೮ರಿಂದ ೨೯ರ ವರೆಗೆ ಶ್ರೀ ಚಾಮುಂಡೇಶ್ವರೀ,ಗುಳಿಗ, ಶ್ರೀ ಭದ್ರಕಾಳಿ, ಶ್ರೀ ಸಾಯಿಬಾಬ ಪಾದುಕೆ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶವು ಮೂಡಬಿದ್ರೆ ಮಠಾಧಿಪತಿ ಕೊಣಾಜೆಕಲ್ಲು ಸಿದ್ಧಾಶ್ರಮ ಮಠ ಶ್ರೀ ಗಣೇಶ ಗುರೂಜಿಯವರ ನೇತೃತ್ವದಲ್ಲಿ ನಡೆಯಲಿದೆ.

ಕಾರ್ಯಕ್ರಮ:
ಮಾ.೨೮ರಂದು ಮಂಗಳವಾರ ರಾತ್ರಿ ೧೨ಕ್ಕೆ ಶಿಖರ ಮಹಾಪೂಜೆ, ಕಲಶಪೂಜೆ
ಮಾ.೨೯ರಂದು ಬುಧವಾರ ಬೆಳಗ್ಗೆ ೬.೨೯ಕ್ಕೆ “ಪ್ರತಿಷ್ಠಾಪನೆ,ಕಲಾಶಭಿಷೇಕ, ಗಣಹೋಮ,ಚಂಡಿಕಾಯಾಗ” ನಡೆಯಲಿದೆ.
ಮಧ್ಯಾಹ್ನ೧೨.೩೦ಕ್ಕೆ ಕನ್ಯಾಪೂಜೆ ಸುಮಂಗಳಿಯರಿಗೆ ವಸ್ತ್ರಧಾನ, ಭಾಗಿನ ನೀಡಲಾಗುವುದು ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ ೬.೦೦ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತಣೆ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಪ್ರಕಟಣೆೆ ತಿಳಿಸಿದೆ.