Published On: Tue, Oct 25th, 2022

ಅ. ೩೦ಕ್ಕೆ ವಾಮಂಜೂರು ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ‘ನವವರ್ಷೋತ್ಸವ’

ಕೈಕಂಬ: ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ(ರಿ) ತಿರುವೈಲು ವಾಮಂಜೂರು ಇದರ ‘ನವವರ್ಷೋತ್ಸವ’ ಅ. ೩೦ರಂದು ನಡೆಯಲಿದೆ.

ವಾಮಂಜೂರಿನ ಶ್ರೀ ಅಮೃತೇಶ್ವರ ದೇವಸ್ಥಾನದ `ರಜತಾದ್ರಿ’ ಸಭಾಭವನದಲ್ಲಿ ಬೆಳಿಗ್ಗೆ ೧೦:೩೦ರಿಂದ ರಾತ್ರಿ ೧೧ ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದ್ದು, ದೇವಸ್ಥಾನದ ಅರ್ಚಕ ಬಾಲಕೃಷ್ಣ ಭಟ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ೧೦:೩೦ಕ್ಕೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸತೀಶ್ ಶೆಟ್ಟಿ ಮೂಡುಜಪ್ಪುಗುತ್ತು, ಕಿರಣ್ ಪಕ್ಕಳ ಪೆರ್ಮಂಕಿಗುತ್ತು, ಚಿತ್ತರಂಜನ್‌ದಾಸ್ ಶೆಟ್ಟಿ, ದಿನೇಶ್ ಕರ್ಕೇರ, ನಾಗರಾಜ ರೈ ತಿಮಿರಿಗುತ್ತು, ಹರಿಕೇಶ್ ಶೆಟ್ಟಿ ನಡಿಗುತ್ತು, ಸುಭಾಷ್ ಬಾಲಕಟ್ಟ ಮತ್ತು ಜಯರಾಮ ಶೆಟ್ಟಿ ಪಾಲ್ಗೊಳ್ಳುವರು.

ಬೆಳಿಗ್ಗೆ ೧೧:೩೦ರಿಂದ ೧ ಗಂಟೆಯವರೆಗೆ ಪೂರ್ವರಂಗದ ಹಾಡುಗಳು, ಪೂರ್ವರಂಗದ ವೇಷಗಳು, ೧ರಿಂದ ೫ರವರೆಗೆ ಕೃಷ್ಣ ವಂದೇ ಜಗದ್ಗುರುಂ' ಯಕ್ಷಗಾನ, ಸಂಜೆ ೫ರಿಂದ ಸೀತಾರಾಮ ಜಾಣು ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಕೃಷ್ಣರಾಜ ತಂತ್ರಿ ದೀಪ ಪ್ರಜ್ವಲಿಸಲಿದ್ದಾರೆ. ಬಿ ಚಂದ್ರಹಾಸ್ ರೈ, ಓಂ ಪ್ರಕಾಶ್ ಶೆಟ್ಟಿ, ರಾಜ್‌ಕುಮಾರ್ ಶೆಟ್ಟಿ ತಿರುವೈಲುಗುತ್ತು, ಅನಂತ ಉಪಾಧ್ಯಾಯ, ಸುಧೀರ್ ಕಣ್ಣೂರು, ಜಗದೀಶ ಶೇಣವ, ಹೇಮಲತಾ ಆರ್. ಸಾಲ್ಯಾನ್, ಭಾಸ್ಕರ ಮೊÊಲಿ, ಜಯಪ್ರಕಾಶ್(ಜೆಪಿ), ಸಂತೋಷ್ ಶೆಟ್ಟಿ ಹೊಸಲಕ್ಕೆ, ಮೋಹನದಾಸ್ ಬಂಗೇರ, ಜಯರಾಮ ಶೆಟ್ಟಿ, ಚಂದ್ರಹಾಸ ಶೆಟ್ಟಿ ನಾರಳ, ರಾಕೇಶ್ ರೈ, ದೀಪಕ್ ಶೆಟ್ಟಿ, ರೋಹಿತ್, ಮಧುರಾಜ್, ಭುವನ್ ಭಾಗವಹಿಸಲಿದ್ದಾರೆ. ಸಂಜೆ ನ೭ರಿಂದ ೧೧ರವರೆಗೆ ಸಂಸ್ಥೆಯ ಕಲಾವಿದರಿಂದಕಾಯಕಲ್ಪ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter