Published On: Tue, Oct 11th, 2022

ಕಡೇಶ್ವಾಲ್ಯ: ಸ್ವಚ್ಛ್ಛತಾ ಅಭಿಯಾನ

ಬಂಟ್ವಾಳ: ತಾಲ್ಲೂಕಿನ ಕಡೇಶ್ವಾಲ್ಯ ಗ್ರಾಮ ಪಂಚಾಯಿತಿ ಸಹಿತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬಿರುವೆರ್ ಕಡೇಶ್ವಾಲ್ಯ ವತಿಯಿಂದ ಹಿಂದೂ ರುದ್ರಭೂಮಿಯಲ್ಲಿ ಸ್ವಚ್ಛತಾ ಅಭಿಯಾನ ಮತ್ತು ತೆಂಗಿನ ಸಸಿ ನೆಡುವ ಕಾರ್ಯಕ್ರಮ ಭಾನುವಾರ ನಡೆಯಿತು.

ಬಂಟ್ವಾಳ ಕಡೇಶ್ವಾಲ್ಯ ಗ್ರಾಮ ಪಂಚಾಯಿತಿ ಸಹಿತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬಿರುವೆರ್ ಕಡೇಶ್ವಾಲ್ಯ ವತಿಯಿಂದ ಹಿಂದೂ ರುದ್ರಭೂಮಿಯಲ್ಲಿ ಸ್ವಚ್ಛತಾ ಅಭಿಯಾನ ಮತ್ತು ತೆಂಗಿನ ಸಸಿ ನೆಡುವ ಕಾರ್ಯಕ್ರಮ ಭಾನುವಾರ ನಡೆಯಿತು. ಹಿಂದೂ ರುದ್ರಭೂಮಿ ಸಮಿತಿ ಗೌರವಾಧ್ಯಕ್ಷ ಲೋಕಯ ಪೂಜಾರಿ ಕುರುಂಬ್ಲಾಜೆ ತೆಂಗಿನ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಮಿತಿ ಅಧ್ಯಕ್ಷ ಜಯರಾಮ ರೈ ಪಾಚುಕೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಅಧಿಕಾರಿ ಚಿದಾನಂದ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.

ಗ್ರಾ.ಪಂ.ಉಪಾಧ್ಯಕ್ಷೆ ಜಯ ಆರ್.ದೇವಾಡಿಗ, ಮೇಲ್ವಿಚಾರಕಿ ಜಯಶ್ರೀ, ನಿವೃತ್ತ ಸೇನಾನಿ ಕೆ.ಕೆ.ಶೆಟ್ಟಿ ಶುಭ ಹಾರೈಸಿದರು. ಪ್ರಮುಖರಾದ ಶ್ಯಾಮಲ ಶೆಟ್ಟಿ, ಮೋಹನ ಕುಮಾರ್, ದಿನೇಶ ಸುರ್ಲಾಜೆ, ಸನತ್ ಆಳ್ವ, ಹರಿಶ್ಚಂದ್ರ ಕಾಡಬೆಟ್ಟು, ಭಾರತಿ ಎಸ್.ರಾವ್ ಮತ್ತಿತರರು ಇದ್ದರು. ಸೇವಾ ಪ್ರತಿನಿಧಿ ಸುಚಿತ್ರಾ ಶೆಟ್ಟಿ ಸ್ವಾಗತಿಸಿ, ಪಿಡಿಒ ಸುನಿಲ್ ಕುಮಾರ್ ವಂದಿಸಿದರು. ಪೂವಪ್ಪ ಮುಂಡಾಲ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter