ಡಾ.ಸುಧಾಕರ ವೈ.ಎನ್. ಅವರಿಗೆ ಡಾಕ್ಟರೇಟ್ ಪದವಿ
ಬಂಟ್ವಾಳ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕ್ಕೋತ್ತರ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಸುಧಾಕರ ವೈ.ಎನ್. ಅವರು ಮಂಡಿಸಿದ ಡೆವಲಪ್ಮೆಂಟ್ ಆಫ್ ನ್ಯೂ ಬಯೋಡಿ ಗ್ರೇಡೇಬಲ್ ಫಾಲಿಮರ್ ಫಾರ್ ಸೂಪರ್ ಕೆಪಾಸಿಟರ್ ಎನ್ನುವ ಮಹಾ ಪ್ರಬಂಧಕ್ಕೆ ಮಣಿಪಾಲದ ಎಂಐಟಿ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ.
ಶ್ರೀ ನರಹರಿ ಪೈ ಹಾಗೂ ರಾಜಲಕ್ಷ್ಮೀ ದಂಪತಿಗಳ ಪುತ್ರನಾಗಿರುವ ಇವರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ತಮ್ಮ ಲೇಖನಗಳನ್ನು ಮಂಡಿಸಿದ್ದಾರೆ. ಹಾಗೂ ಎಲೆಕ್ಟ್ರೋಕೆಮಿಕಲ್ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ.