ಮೂಕಪ್ರಾಣಿಗಳ ಹಸಿವು ನೀಗಿಸಿದ ಸುಧಾಕರ ಶೆಟ್ಟಿ
ಮೂಡಬಿದಿರೆ:ದೇಶಾದ್ಯಂತ ಲಾಕ್’ಡೌನ್ ಹಿನ್ನೆಲೆಯಲ್ಲಿ ಎಷ್ಟೊ ಬಡವರು ಒಂದು ಹೊತ್ತಿನ ಊಟಕ್ಕೆ ತೊಂದರೆ ಅನುಭವಿದ್ದುಂಟು, ಇವರಿಗಾಗಿ ಅದೆಷ್ಟೊ ಸಂಘ ಸಂಸ್ಥೆಗಳು ಕಿಟ್ ವ್ಯವಸ್ಥೆ ಮಾಡಿ ಹಸಿವು ನೀಗಿಸಲು ನೆರವಾಗಿದ್ದಾರೆ.
ಆದರೆ ಮೂಕಪ್ರಾಣಿಗಳೂ ಕೂಡ ಈ ಸಮಸ್ಯೆಯಿಂದ ಹೊರತಲ್ಲ, ಈ ನೋವನ್ನು ಅರಿತ ಮೂಡಬಿದಿರೆಯ ಸುದಾಕರ್ ಶೆಟ್ಟಿ ಎಂಬುವವರು ಸುಮಾರು ಎಪ್ಪತ್ತೈದು ಬೀದಿ ನಾಯಿಗಳಿಗೆ ಪ್ರತೀ ರಾತ್ರಿ ಅನ್ನವಿತ್ತು ಹಸಿದ ಮೂಕಪ್ರಾಣಿಗಳಿಗೆ ಅನ್ನದಾತರಾಗಿದ್ದಾರೆ,
ಇವರು ನಾಟಕ ರಂಗದಲ್ಲಿ ಸಂಗೀತ ವಿಭಾಗದಲ್ಲಿ ಸುಮಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, ತಾವು ಸ್ವತಃ ಆರ್ಥಿಕ ಸಮಸ್ಯೆಯಲ್ಲಿದ್ದರೂ ಮೂಕ ಪ್ರಾಣಿಗಳ ಮೇಲಿನ ಅಪಾರ ಪ್ರೀತಿತಿಂದಾಗಿ ಮಾನವೀಯ ನೆಲೆಯಲ್ಲಿ ತನ್ನಿಂದಾದ ಸಹಾಯವನ್ನು ನೀಡಿ ಅನ್ನದಾತರೆನಿಸಿಕೊಂಡ ಶೆಟ್ಟಿಯವರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇನ್ನಷ್ಟು ಸಮಾಜಮುಖಿ ಸೇವೆಗಳು ನಡೆಯಲು, ದೇವರು ನಿಮಗೆ ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ ಎಂಬ ಹಾರೈಕೆ ನಮ್ಮದು.