ಪೊಳಲಿಗೆ ಉಪಜಿಲ್ಲಾಧಿಕಾರಿ ಭೇಟಿ
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಫೆ.13ರಿಂದ ಫೆ.21ರವರೇಗೆ ನಡೆಯುವ ಕಲಶಾಭಿಷೇಕ ಮಹೋತ್ಸವದ ಸಂಪ್ರೋಕ್ಷಣೆಯಂದು ಉಪ ಜಿಲ್ಲಾಧಿಕಾರಿ ಎಮ್. ಜೆ . ರೂಪ ಪೊಳಲಿ ದೇವಳಕ್ಕೆ ಅಗಮಿಸಿ ದೇವಳದ ಅರ್ಚಕ ಪದ್ಮನಾಭ ಭಟ್ ಅವರಿಂದ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇವಳದ ಆನುವಂಶಿಕ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ , ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ ಇದ್ದರು.