ಭಜನೆಯ ತರಬೇತುದಾರ ತಬಲಾ ಹಾರ್ಮೋನಿಯಂ ವಾದಕ ದೇವದಾಸ್ ಪ್ರಬು ಇನ್ನಿಲ್ಲ
ಬಂಟ್ವಾಳ: ಬಂಟ್ವಾಳದಲ್ಲಿ ಹಲಾವಾರು ವರ್ಷಗಳಿಂದ ಭಜನೆಯ ತರಬೇತುದಾರರಾಗಿ ತಬಲಾ ಹಾರ್ಮೋನಿಯಂ ಕೊಳಲು ಹಾಗೂ ಭಜನೆ ಮೂಲಕ ಅನೇಕ ಶಿಷ್ಯವೃಂದವನ್ನು ಕಟ್ಟಿ ಬೆಳೆಸಿದ ಸರಳತೆ ಹಾಗೂ ಸದ್ಗುಣಗಳ ಮೂಲಕ ಗುರುಸ್ಥಾನವನ್ನು ತುಂಬಿದ್ದ ಬಂಟ್ವಾಳ ದೇವದಾಸ್ ಪ್ರಭು ಅವರು ಮಂಗಳವಾರ ನಿಧನಹೊಂದಿದರು.
ಸಂಗೀತೋಪಕರಣಗಳನ್ನು ಹಲವರಿಗೆ ನುಡಿಸಲು ಕಲಿಸಿಕೊಟ್ಟ ಕೃಷ್ಣಾ ಭಜನಾ ಮಂಡಳಿಯ ಸ್ಥಾಪಕರು , ರಾಮಾಂಜನೇಯ ಭಜನಾ ಮಂಡಳಿಯಲ್ಲೂ ಸದಸ್ಯರಾಗಿ , ಭಜನಾ ಪುಸ್ತಕಗಳನ್ನು ಮುದ್ರಿಸಿ , ಜನಾನುರಾಗಿಯಾಗಿದ್ದರು.