ಜೈನ್ ಮಿಲನ್ ನಿಂದ ಶೈಕ್ಷಣಿಕ ಪ್ರತಿಭಾ ಪುರಸ್ಕಾರ
ಬಂಟ್ವಾಳ: ಜೈನ್ ಮಿಲನ್ ಬಂಟ್ವಾಳ ಇದರ ವತಿಯಿಂದ ಅವಿಭಜಿತ ದ.ಕ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಪಾಣೆಮಂಗಳೂರಿನ ಜಿನಚೈತ್ಯಾಲಯದಲ್ಲಿ ನಡೆದ ಸೋಣ ಶುಕ್ರವಾರ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಪ್ರಸ್ತುತ ಸಾಲಿನ ಎಸ್.ಎಸ್.ಯಲ್.ಸಿ.ಹಾಗೂ ಪಿಯುಸಿ ತಲಾ ಮೂವರು ಹಾಗೂ ಬಂಟ್ವಾಳ ತಾಲೂಕಿನಲ್ಲಿ ಎಸ್.ಎಸ್.ಯಲ್.ಸಿ.ಮತ್ತುಪಿಯುಸಿ ತಲಾ ಮೂವರು ಉತ್ತಮ ಅಂಕಗಳಿಸಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದನಾ ಪತ್ರ ನೀಡಿ ಪುರಸ್ಕರಿಸಲಾಯಿತು. ಭಾರತೀಯ ಜೈನ್ ಮಿಲನ್ ವಲಯ 8ರ ಉಪಾಧ್ಯಕ್ಷ ಸುದರ್ಶನ್ ಜೈನ್ ,ಮಂಗಳೂರು ವಿಭಾಗದ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ , ಮುನಿರಾಜ ರೆಂಜಾಳ ರವರು ಅತಿಥಿಗಳಾಗಿ ಭಾಗವಹಿಸಿದ್ದರು.
ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ಡಾ.ಸುದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪೂರ್ವಧ್ಯಕ್ಷ ವಿಜಯ ಕುಮಾರಿ ಇಂದ್ರ, ಕೋಶಾಧಿಕಾರಿ ಅಜಿತ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಸನ್ಮತಿ ಜಯಕೀರ್ತಿಕಾರ್ಯಕ್ರಮ ನಿರ್ವಹಿಸಿದರು . ಮದಿಮೆತ್ತಿಮಾರು ನಮಿರಾಜ್ ಜೈನ್ ಕುಟುಂಬಸ್ಥರ ಆತಿಥೇಯದಲ್ಲಿ ಪವಿತ್ರ ಸೋಣ ಶುಕ್ರವಾರ ಕಾರ್ಯಕ್ರಮ ಜರುಗಿತು.