ಆಟೋ ರಿಕ್ಷಾ ಚಾಲಕರಿಗೆ ಅಕ್ಕಿ ವಿತರಣೆ
ಫರಂಗಿಪೇಟೆ: ಫರಂಗಿಪೇಟೆ ಯ ಕರಾವಳಿ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಲಾಕ್ ಡೌನ್ ನಿಂದ ತತ್ತರಿಸಿರುವ ಆಟೋ ರಿಕ್ಷಾ ಚಾಲಕರಿಗೆ ಅಕ್ಕಿ ವಿತರಿಸಿದರು .
ಸುಮಾರು ೧೦೦ ರಿಕ್ಷಾ ಚಾಲಕರು ಇದರ ಪ್ರಯೋಜನ ಪಡೆದರು ,ಕಲ್ಲ ತಡಮೆ ಅರುಣ್ ಪೂಜಾರಿ ಮನೆಯಲ್ಲಿ ನಡೆದ ವಿತರಣಾ ಕಾರ್ಯಕ್ರಮ ದ ಸಂದರ್ಭ ದಲ್ಲಿ ಕರಾವಳಿ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಗೌರವಾಧ್ಯಕ್ಷರಾದ ದಿನೇಶ್ ಶೆಟ್ಟಿ ಕೊಟ್ಟಿಂಜ ,ಮೊಹಮ್ಮದ್ ಮೋನು, ಅಧ್ಯಕ್ಷರಾದ ಮೊಹಮ್ಮದ್ ಹನೀಫ್ , ಕಾರ್ಯದರ್ಶಿ ಅರುಣ್ ಕಲ್ಲತಡಮೆ, ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.