ಮಧ್ಯ ವ್ಯಸನಿಗಳ ಮಕ್ಕಳ ಅರಿವು ಸಪ್ತಾಹ
ಮಲ್ಪೆ – ಮಧ್ಯ ವ್ಯಸನಿಗಳ ಮಕ್ಕಳ ಅರಿವು ಸಪ್ತಾಹದ ಅಂಗವಾಗಿ ಫೆ.14ರಂದು ಮಲ್ಪೆ ಬೀಚ್ ನಲ್ಲಿ “ನೀನು ಒಬ್ಬoಟಿಯಲ್ಲ ” ಎಂಬ ವಿಷಯವನ್ನು ಇಟ್ಟುಕೊಂಡು ಗಾಳಿಪಟ ಪ್ರದಶ೯ನ ನಡೆಯಿತು.ಅಂತರಾಷ್ಟಿಯ ಖ್ಯಾತಿಯ ಕಲಾವಿದ, ಪರಿಸರ ತಜ್ಞ ದಿನೇಶ್ ಹೊಳ್ಳ ಕಾಯ೯ಕ್ರಮ ನಡೆಸಿಕೊಟ್ಟರು.
ಉದ್ಘಾಟನೆಯನ್ನು ನಿವೃತ್ತ ಪೋಲಿಸ್ ಅಧಿಕಾರಿ ಜನಾಧ೯ನ್ ನಾಯಕ್ ನೆರವೇರಿಸಿ ಶುಭ ಹಾರೈಸಿದರು.ಈ ಕಾಯ೯ಕ್ರಮ ಎ.ವಿ ಬಾಳಿಗ ಆಸ್ಪತ್ರೆ ‘ರೋಟರಿ ಕ್ಲಬ್ ಮತ್ತು ಐಎಂಎ ವತಿಯಿಂದ ನಡೆಯಿತು.ಈ ಸಂದಭ೯ದಲ್ಲಿ ಮನೋವೈದ್ಯ ಡಾ|| ವಿರೂಪಾಕ್ಷ ದೇವರ ಮನೆ ಆಸ್ಪತ್ರೆಯ ಸಿಬ್ಬಂದಿಗಳು ಭಾಗವಹಿಸಿದ್ದರು.