ಕರ್ನಾಟಕ ಟೈಲಸ್೯ ಆಸೋಸಿಯೇಶನ್ ಬಂಟ್ವಾಳ ಸಮಿತಿಯ ಮಹಾಸಭೆ,ಸನ್ಮಾನ ಸಮಾರಂಭ
ಬಂಟ್ವಾಳ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮಂಗಳೂರು ಇದರ ಬಂಟ್ವಾಳ ತಾಲೂಕು ಸಮಿತಿಯ 20ನೇ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಸಮಾರಂಭ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಭಾನುವಾರ ನಡೆಯಿತು.ನೇತ್ರ ತಜ್ಞ ಡಾ. ಅಶ್ವಿನಿ ನಾಯಕ್ ಸುಜೀರ್ ಕಾರ್ಯಕ್ರಮ ಉದ್ಘಾಟಿಸಿದರು.ಅವರು ಮಾತನಾಡಿ ಸದಸ್ಯರು ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಸಂಘಟನೆ ಬಲಿಷ್ಠವಾಗಿ ಬೆಳೆಯಲು ಸಾಧ್ಯವಿದೆ. ಆರೋಗ್ಯ ವಿಮೆಯನ್ನು ಮಾಡುವ ಮೂಲಕ ತುರ್ತು ಸಂದರ್ಭದಲ್ಲಿ ಪ್ರಯೋಜನ ಪಡೆಯಲು ಸಾಧ್ಯವಿದೆ ಎಂದರು. ಈ ಸಂದರ್ಭ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ನೇತ್ರತಜ್ಞ ಡಾ. ಅಶ್ವಿನಿ ನಾಯಕ್ ಸುಜೀರ್ ಅವರನ್ನು ಸನ್ಮಾನಿಸಲಾಯಿತು.
ಕೆಎಸ್ಟಿಎ ರಾಜ್ಯಧ್ಯಕ್ಷ ಕೆ.ಆನಂದ ಪ್ರಾಸ್ತವಿಕವಾಗಿ ಮಾತನಾಡಿ ವೃತ್ತಿ ಬಾಂದವರಿಗಾಗಿ ನಮ್ಮ ಹೋರಾಟವನ್ನು ಮಾಡಿಕೊಂಡು ಬಂದಿದ್ದೇವೆ, ಸಂಘಟನೆ ಬಲಿಷ್ಠವಾಗಿ ಎಲ್ಲರೂ ಸಂಘಟಿತರಾಗಿ ಸಾಮಾಜಿಕ ಭದ್ರತೆಯನ್ನು ಪಡೆಯುವ ಎಂದು ತಿಳಿಸಿದರು. ನಮ್ಮ ಧ್ವನಿ ಗಟ್ಟಿಯಾದರೆ ಮಾತ್ರ ನಮಗೆ ಎಲ್ಲರೂ ಮಾನ್ಯತೆ ನೀಡುತ್ತಾರೆ. ಮನುಕುಲದ ಮಾನವ ಸಮಾಜದ ಮಾನ ಮುಚ್ಚುವ ಕೆಲಸ ಮಾಡಿದ ಟೈಲರ್ ವೃತ್ತಿಯ ಬಾಂದವ್ಯವನ್ನು ಮುಂದುವರೆಸುವ ಎಂದು ತಿಳಿಸಿದರುಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಈಶ್ವರ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಸುರೇಶ್ ಸಾಲ್ಯಾನ್ ದಂಪತಿಯನ್ನು ಸನ್ಮಾನಿಸಲಾಯಿತು.
ಹಿರಿಯ ಟೈಲರ್ಗಳಾದ ವಿಶ್ವನಾಥ ನಾಯಕ್, ಲೋಕಪಾಲ್, ಸರೊಜಾ ಬಿ.ರಾವ್, ಮಹಮ್ಮದ್ ಕಲ್ಲಡ್ಕ, ಕೇಶವ ಶೆಟ್ಟಿ, ಆನಂದ ಸಾಲೆತ್ತೂರು, ಮೋಹನ್ ಅಂಚನ್ ಅವರನ್ನು ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವಸಂತ, ರಾಜ್ಯ ಉಪಾಧ್ಯಕ್ಷ ಸುರೇಶ್ಸಾಲ್ಯಾನ್, ಜಿಲ್ಲಾಧ್ಯಕ್ಷ ಪ್ರಜ್ವಲ್ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಕೋಶಾಧಿಕಾರಿ ಉದಯ ಅಮೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ್ ಕುಲಾಲ್ ಸ್ವಾಗತಿಸಿ, ವಂದಿಸಿದರು. ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನೂತನ ಅಧ್ಯಕ್ಷರಾಗಿ ಈಶ್ವರ್ ಕುಲಾಲ್, ಕಾರ್ಯದರ್ಶಿಯಾಗಿ ನಾಗೇಶ್ ಕುಲಾಲ್, ಕೋಶಧಿಕಾರಿಯಾಗಿ ಯಾದೇಶ್ ಪುನರಾಯ್ಕೆಗೊಂಡರು. ಇದೇ ಸಂದರ್ಭ ಅದೃಷ್ಟ ಚೀಟಿ ವಿಜೇತರನ್ನು ಆಯ್ಕೆ