ರಸ್ತೆ ಕಾಂಕ್ರೀಟೀಕರಣಕ್ಕೆ ಶಿಲಾನ್ಯಾಸ
ಬಂಟ್ವಾಳ: ಬರಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡೇವು ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಜಿಪಂ ಸದಸ್ಯೆ ಕಮಲಾಕ್ಷಿ ಪೂಜಾರಿ ಅವರು ಶಿಲಾನ್ಯಾಸ ನೆರವೇರಿಸಿದರು.ಗೋಳ್ತಮಜಲು ಜಿಪಂ ಸದಸ್ಯೆ ಕಮಲಾಕ್ಷಿ ಪೂಜಾರಿಯವರ ಜಿಪಂ ನಿಧಿಯಿಂದ ಈ ರಸ್ತೆಗೆ ಕಾಂಕ್ರೀಟೀಕರಣಗೊಳಿಸಲಾಗಿತ್ತಿದೆ.
ಈ ಸಂದರ್ಭದಲ್ಲಿ ಮಾಜಿ ಪಂಚಾಯತ್ ಅಧ್ಯಕ್ಷರಾದ ಸದಾಶಿವ ಜಿ, ಬಿಜೆಪಿ ಎರಡು ಮತ್ತು ಮೂರನೇ ವಾರ್ಡಿನ ಅಧ್ಯಕ್ಷರುಗಳಾದ ಅಶ್ವತ್ಥ್ ಬರಿಮಾರು, ವಸಂತ ಪೂಜಾರಿ ಅಲೈತ್ತಿಮಾರು, ರಾಜೀವಿ ಶೆಟ್ಟಿ ಅರ್ಬಿ,ಹಿರಿಯರಾದ ಚಂದಪ್ಪ ಗೌಡ ಪಾರ್ಪಕಜೆ, ನಾಗೇಶ್ ಕುಲಾಲ್,ಆನಂದ ಮುಂಡೇವು , ರಾಜೇಶ್, ರಾಮಚಂದ್ರ ಮೂಲ್ಯ, ದಾಮೋದರ ಹಾಗೂ ಕಾಂಟ್ರಾಕ್ಟುದಾರ ಮಾರ್ಷಲ್ ಪಾಯಸ್ ಉಪಸ್ಥಿತರಿದ್ದರು