ವಾರ್ಷಿಕಕ್ರೀಡಾಕೂಟ 2019-20
ಶ್ರೀರಾಮ ಪ್ರೌಢಶಾಲೆಕಲ್ಲಡ್ಕಇದರ ವಾರ್ಷಿಕಕ್ರೀಡಾಕೂಟ ನಡೆಯಿತು. ಕಾರ್ಯಕ್ರಮವನ್ನು ಮಹಾಬಲ ಶೆಟ್ಟಿ ನಂದಗೋಕುಲ ಇವರುಕ್ರೀಡಾಜ್ಯೋತಿಯ ಮೂಲಕ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿಗ್ಯಾರೇಜ್ ಮಾಲಕರ ಸಂಘದಅಧ್ಯಕ್ಷರಾದ ವಿಶ್ವನಾಥ್ರವರು ಮಾತನಾಡಿ “ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕ್ರೀಡಾ ವ್ಯವಸ್ಥೆಗೆಅತ್ಯತ್ತಮವಾದ ಮೈದಾನ ಸವಲತ್ತುಇದೆ.
ಇದನ್ನುಎಲ್ಲಾ ಕ್ರೀಡಾಪಟುಗಳು ಸದುಪಯೋಗ ಪಡೆದುಕೊಂಡುಅತ್ಯುತ್ತಮ ಕ್ರೀಡಾಪಟುಗಳಾಗಬೇಕೆಂದು” ಶುಭನುಡಿದರು.ಕಾರ್ಯಕ್ರಮದಲ್ಲಿಗ್ಯಾರೇಜ್ ಮಾಲಕರ ಸಂಘದ ನಿರ್ದೇಶಕರಾದ ಸುಧಾಕರ್ ಸಾಲಿಯಾನ್, ರಮೇಶ್ ಭಂಡಾರಿ, ಕೃಷಿಕರಾದಶರತ್ಕುಮಾರ್ಅಮ್ಟೂರು, ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರಾದಡಾ|| ಪ್ರಭಾಕರ ಭಟ್ಕಲ್ಲಡ್ಕ, ಶ್ರಿರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದರಮೇಶ್ಎನ್, ಮುಖ್ಯಶಿಕ್ಷಕಿಯಾದ ವಸಂತಿಕುಮಾರಿ, ಶ್ರೀರಾಮ ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನುಗೌತಮಿ ಸ್ವಾಗತಿಸಿ, ಸ್ವಾತಿಲಕ್ಷ್ಮೀ ನಿರೂಪಿಸಿ ವಿಂದ್ಯಾಶ್ರೀ ವಂದಿಸಿದರು.