ಅಜೆಕಾರು: ಬಸ್ – ಬೈಕ್ ಮುಖಾಮುಖಿ ಢಿಕ್ಕಿ; ಮಹಿಳೆಗೆ ಗಾಯ
ಅಜೆಕಾರು: ಬಸ್ ಹಾಗೂ ಬೈಕ್ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮಹಿಳೆಗೆ ಗಾಯಗೊಂಡಿರುವ ಘಟನೆ ಇಲ್ಲಿನ ಸಮೀ ಪದ ಕಾಡುಹೊಳೆಯಲ್ಲಿ ನಡೆದಿದೆ.
ಗಾಯಾಳನ್ನು ಹೆಬ್ರಿ ಸಮೀಪದ ಕಬ್ಬಿನಾಲೆ ಗ್ರಾಮದ ಮತ್ತಾವು ನಿವಾಸಿ ವಿಶಾಲಾಕ್ಷಿ ಶೆಟ್ಟಿ ಎಂದು ಗುರುತಿಸಲಾಗಿದೆ.
ವಿಶಾಲಾಕ್ಷಿ ಅವರು ತನ್ನ ಸತೀಶ್ ಶೆಟ್ಟಿ ಅವರ ಬೈಕಿನಲ್ಲಿ ಅಜೆಕಾರಿನಲ್ಲಿರುವ ಸಂಬಂಧಿಕರ ಮನೆಗೆ ಹೋಗುತ್ತಿದ್ದಾಗ ಕಾಡು ಹೊಳೆಯಲ್ಲಿ ಹೆಬ್ರಿಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ ದು ತಿಳಿದು ಬಂದಿದೆ.
ವಿಶಾಲಾಕ್ಷಿ ಶೆಟ್ಟಿ ಅವರನ್ನು ಅಜೆಕಾರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.