ಮೇಯರ್ ಭಾಸ್ಕರ ಕೆ. ಅವರಿಗೆ ಅಭಿಂದನೆ
ಮಂಗಳೂರು: ಶ್ರೀ ಕ್ಷೇತ್ರ ಮಂಗಳಾದೇವಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಗೊಂಡ ಭಾಸ್ಕರ್ ಕೆ. ಅವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು. ಆಡಳಿತ ಮೋಕ್ತೆಸರರಾದ ರಮಾನಾಥ ಹೆಗ್ಡೆ, ಮೋಕ್ತೇಸರರಾದ ರಾಮನ್ಯಾಕ್ ಕೋಟೆಕಾರ್, ಹಾಗೂ ಪ್ರೇಮಲತಾ, ಎಸ್.ಕುಮಾರ್, ಅನುವಂಶಿಕ ಮೋಕ್ತೇಸರರಾದ ಜಿ.ರಘುರಾಮ ಉಪಾಧ್ಯಾಯ, ಎಂ.ಗಣೇಶ್ ಐತಾಳ್, ಬಿ.ವೆಂಕಟರಮಣ ಐತಾಳ್ ಉಪಸ್ಥಿತಿಯಲ್ಲಿ ಶ್ರೀ ದೇವರ ಪ್ರಸಾದ ರೂಪದಲ್ಲಿ ಗೌರವದ ಶೇಷವಸ್ತ್ರ, ಫಲವಸ್ತು ಸ್ಮರಣಿಕೆ ಇತ್ತು ಗೌರವಿಸಲಾಯಿತು.
ಸಂಯೋಜಕರಾದ ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.ಕ್ಷೇತ್ರದ ಸಾಂಸ್ಕ್ರತಿಕ ಕಾರ್ಯಕ್ರಮದ ಸಂಯೋಜಕರಾದ ವಿನಯಾನಂದ ವಂದಿಸಿದರು. ಶ್ರೀ ವಾಸುದೇವ ರಾವ್ ಕುಡುಪು ಅಭಿನಂದನಾ ಭಾಷಣಗೈದರು.