ವಿಧಾನ ಸಭೆ ಚುನಾವಣೆ: ಮೂಡುಬಿದಿರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಉಮಾನಾಥ್ ಕೋಟ್ಯಾನ್ ಸ್ಪರ್ಧೆ?
ಮಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಇನ್ನೂ ಮೂಡುಬಿದಿರೆ ಕ್ಷೇತ್ರಕ್ಕೆ ಬಂದರೆ ಕಾಂಗ್ರೆಸ್-ಬಿಜೆಪಿ ತಮ್ಮ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಅಣಿಯಾಗುತ್ತಿವೆ.
ಸದ್ಯ ಮೂಡುಬಿದಿರೆ ಶಾಸಕ ಅಭಯಚಂದ್ರ ಜೈನ್ ಕಾರ್ಯ ವೈಖರಿ ಹಾಗೂ ಅವರ ನಡತೆ ಬಗ್ಗೆ ಜನತೆಯಲ್ಲಿ ಅಸಮಾಧಾನ ಇದ್ದು, ಇದನ್ನೇ ಬಂಡವಾಳಗಿಸಿರುವ ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿ ಜೈನ್ ಅವರನ್ನು ಕೆಳಗಿಳಿಸಲು ಪಣತೊಟ್ಟಿದೆ.
ಇನ್ನು ಅಭಯಚಂದ್ರ ಜೈನ್ ನಡವಳಿಕೆ ಬಗ್ಗೆ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಅತೃಪ್ತಿ ಮೂಡಿಸಿದ್ದು, ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಅಭಯಚಂದ್ರ ಅವರಿಗೆ ಟಿಕೆಟ್ ಕೈ ತಪ್ಪಿದೆ ಎನ್ನಲಾಗಿದೆ. ಈ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಕಾಂಗ್ರೆಸ್ ನಲ್ಲೂ ಬಾರಿ ಪೈಪೋಟಿ ಏರ್ಪಟ್ಟಿದೆ. ಇತ್ತ ಬಿಜೆಪಿ ಪಾಳಯದಲ್ಲಿ ಮೂಡುಬಿದ್ರೆ ಕ್ಷೇತ್ರಕ್ಕೆ ಟಿಕೆಟ್ ಫೈನಲ್ ಆಗಿದ್ದು, ಕಳೆದ ಬಾರಿ ಬಹಳ ಕಡಿಮೆ ಅಂತರದಲ್ಲಿ ಸೋತರು ಈ ಬಾರಿ ಗೆಲ್ಲಲ್ಲೆ ಬೇಕೆಂದು ಮತ್ತೊಮ್ಮೆ ಬಹುದೊಡ್ಡ ಪ್ರಯೋಗಕ್ಕೆ ಇಳಿದಿದೆ.
ಸ್ಥಳೀಯ ಶಾಸಕ ಹಿಂದು ವಿರೋಧಿ ನೀತಿ ಹಾಗೂ ರಾಜ್ಯ ಸರಕಾರದ ಹಿಂದುಗಳ ಮೇಲಿನ ದೌರ್ಜನ್ಯದ ಸದುಪಯೋಗ ಪಡಿಸಿಕೊಳ್ಳಲು ಕಠರ್ ಹಿಂದುವಾದಿ, ಸಂಘಪರಿವಾರದ ಹಿರಿಯರ ವಲಯದಲ್ಲಿ ಗುರುತಿಸಿಕೊಂಡ ಉಮಾನಾಥ್ ಕೋಟ್ಯಾನ್ ಅವರನ್ನು ಆಯ್ಕೆ ಮಾಡಿದ್ದು ಈ ಬಗ್ಗೆ ಹೈಕಮಾಂಡ್ ಕೂಡ ಗ್ರೀನ್ ಸಿಗ್ನಲ್ ನೀಡಿದೆ ಎಮದು ತಿಳಿದು ಬಂದಿದೆ.
ಉಮಾನಾಥ್ ಕೋಟ್ಯಾನ್ ಸಂಘಪರಿವಾರದಿಂದ ಬೆಳೆದು ಬಂದವರಾಗಿದ್ದು, ಹಿಂದುತ್ವದ ಬಗ್ಗೆ ಅಪಾರ ಕೆಲಸವನ್ನು ಮಾಡಿ ತಳಮಟ್ಟದಿಂದ ಬೆಳೆದುಬಂದ ಒಬ್ಬ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಸಂಘಪರಿವಾರದ ಆಜ್ಣೆಯ ಮೆರೆಗೆ ಕೋಟ್ಯಾನ್ ಅವರಿಗೆ ಟಿಕೆಟ್ ಲಭಿಸಿದೆ ಎಂದು ಹೇಳಲಾಗುತ್ತಿದೆ.ಹೂ ವ್ಯಾಪಾರಿ ಪ್ರಶಾಂತ್ ಪುಜಾರೀ ಹತ್ಯೆಯಾಗದ ಇಡೀ ಕ್ಷೇತ್ರದಲ್ಲಿ ಹತ್ಯೆ ಮಾಡಿದ ಆರೋಪಗಳನ್ನು ಬಂಧಿಸುವರೆಗೆ ಹೋರಾಟ ಮಾಡಿ ಬಲಿಯಾದ ಪಕ್ಷದ ಕಾರ್ಯಕರ್ತನ ಕುಟುಂಬಕ್ಕೆ ಆರ್ಥಿಕ ನೆರವು ದೊರಕಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಈ ಎಲ್ಲಾ ಕಾರಣದಿಂದ ಹೈಕಮಾಂಡ್ ಮನ ಗೆದ್ದಿರುವ ಕೊಟ್ಯಾನ್ ಮುಂದಿನ ಚುನಾವಣೆಯಲ್ಲಿ ಮುಲ್ಕಿ ಮೂಡುಬಿದಿರೆ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನಲಾಗಿದೆ.