ಚಿಕ್ಕಮಗಳೂರು: ಗಂಟಲಲ್ಲಿ ಅವಲಕ್ಕಿ ಸಿಲುಕಿ ಮಗು ಮೃತ್ಯು
ಚಿಕ್ಕಮಂಗಳೂರು: ಗಂಟಲಲ್ಲಿ ಸೇಬು ಹಣ್ಣಿನ ಅಗಳು ಸಿಕ್ಕು ಮಗು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಕಾಫಿನಾಡಿನಲ್ಲಿ ಮಗುವಿನ ಗಂಟಗಲ್ಲಿ ಅವಲಕ್ಕಿ ಸಿಲುಕಿ ಮೃತಪಟ್ಟಿದೆ.
ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಸಮೀಪದ ಶಿರಗುಂದದ ನಿವಾಸಿಗಳಾದ ದುರ್ಗಾಪ್ರಸಾದ್ ಅವರ ಮಗ ಅನೀಶ್(3) ಮೃತ ಮಗು.
ಅವಲಕ್ಕಿ ತಿನ್ನುವಾಗ ಗಂಟಲಲ್ಲಿ ಸಿಲುಕಿ ಉಸಿರಾಟದ ತೊಂದರೆಯಿಂದ ಮಗು ಅಸ್ವಸ್ಥಗೊಂಡಿತ್ತು. ಚಿಕಿತ್ಸೆಗಾಗಿ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಗುವನನು ಹಾಸನಕ್ಕೆ ಕಳುಹಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದೆ.
ಕಲ ದಿನಗಳ ಹಿಂದಷ್ಟೇ ಗಂಟಲಿನಲ್ಲಿ ತಂಗಿನ ಚೂರು ಸಿಲುಕಿ ಶಿಕ್ಷಕಿಯೊಬ್ಬರು ಸಾವನ್ನಪ್ಪಿದ ಘಟನೆ ವರದಿಯಾಗಿತ್ತು.