ಪಾಕ್ ನ ಅಪ್ರಚೋದಿತ ದಾಳಿಗೆ ಇಬ್ಬರು ನಾಗರಿಕರು ಬಲಿ
ಶ್ರೀನಗರ: ಪಾಕ್ ಸೈನಿಕರು ಅಂತಾರಾಷ್ಟ್ರೀಯ ಗಡಿ ರೇಖೆಯ ಎಸ್ಆರ್ ಪುರ, ಸಂಬಾ, ಕುತ್ವಾ, ಆರ್ನಿಯಾ ಹಾಗೂ ರಾಮ್ಗಢ್ ಸೆಕ್ಟರ್ಗಳಲ್ಲಿ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ನಾಗರಿಕರು ಮೃತಪಟ್ಟರೆ ನಾಲ್ವರು ಗಾಯಗೊಂಡಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ.
ಮೃತರನ್ನು ಎಸ್ಆರ್ ಪುರ ಸೆಕ್ಟರ್ನ ನಾಗರಿಕರು ಎಂದು ಗುರುತಿಸಲಾಗಿದದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾಕ್ನ ಅಪ್ರಚೋದಿತ ದಾಳಿಗೆ ಬಿಎಸ್ಎಫ್ ಯೋಧರು ಪ್ರತಿ ದಾಳಿ ಮುಂದುವರೆಸಿದ್ದಾರೆ.
ಇನ್ನೂ ಗಡಿಯಿಂದ 4 ಕಿ.ಮೀ. ಅಂತರದೊಳಗಿನ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ.