ಸುರತ್ಕಲ್: ಆತಂಕದ ನಡುವೆ ಕಿಡಿಕೇಡಿಗಳಿಂದ ಬಸ್ ಗೆ ಕಲ್ಲು ತೂರಾಟ
ಸುರತ್ಕಲ್: ದೀಪಕ್ ಹ್ಯತೆ ಹಿನ್ನೆಲೆ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದ ಬೆನ್ನಲ್ಲೆ ಕಿಡಿಕೇಡಿಗಳ ಗುಂಪೊಂದು ಎರಡು ಬಸ್ ಗಳಿಗೆ ಕಲ್ಲು ತೂರಾಟ ನಡೆಸಿದ ಘಟನೆ ಇಲ್ಲಿನ ಕಾನ ಹಾಗೂ ಸೂರಿಂಜೆ ಭಾಗದಲ್ಲಿ ನಡೆದಿದೆ.
ಈ ಕೊಲೆ ನಡೆದ ಬಳಿಕ ಕೆಲವೇ ಗಂಟೆಗಳಲ್ಲಿ ಜನರ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇನ್ನೂ ಕಾಟಿಪಳ್ಳ, ಚೊಕ್ಕಬೆಟ್ಟು ಹಾಗೂ ಸುರತ್ಕಲ್ ಭಾಗದಲ್ಲಿ ಅಂಗಡಿ ಮಾಲಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟನ್ನು ಬಂದ್ ಗೊಳಿಸಿದರೆ, ಕೆಲವಡೆ ಬಲವಂತವಾಗಿ ಮುಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.