10 ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ
ವಿಟ್ಲ: ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರ ಮಂಜಲಾಡಿ ಒಕ್ಕೆತ್ತೂರು ಇದರ ವತಿಯಿಂದ ವಿಠಲ ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವ 10 ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಲಾಗಿದ್ದು, ಅವರ 2019-20 ನೇ ಸಾಲಿನ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಅವರಿಗೆ ಕ್ಷೇತ್ರದ ಧರ್ಮದರ್ಶಿ ಪ್ರಸಾದ್ ಎಂ ಮಂಜಲಾಡಿ ನೀಡಿದರು.
ಈ ಸಂದರ್ಭದಲ್ಲಿ ಡಾ| ರವಿಶಂಕರ್ ಗಣೇಶ್ ಚಿಕಿತ್ಸಾಲಯ ವಿಟ್ಲ, ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್, ಶಿಕ್ಷಕರುಗಳಾದ ಸಿ ಹೆಚ್ ಸುಬ್ರಹ್ಮಣ್ಯ ಭಟ್, ಮಹಬಲೇಶ್ವರ ಭಟ್, ಶಂಕರನಾರಾಯಣ ಪ್ರಸಾದ್ ಮತ್ತು ರಾಜಶೇಖರ್ ಉಪಸ್ಥಿತರಿದ್ದರು