ಬಂಟ್ವಾಳ ಲೋಕಸಭಾ ಚುನಾವಣೆ ಯ ಹಿನ್ನೆಲೆ ಪೋಲೀಸ್ ಪಥಸಂಚಲನ
ಬಂಟ್ವಾಳ: ಚುನಾವಣಾ ಮಹಾಸಂಗ್ರಾಮ 2019 ಮೇ.18 ರಂದು ನಡೆಯುವ ಲೋಕಸಭಾ ಚುನಾವಣೆ ಯ ಹಿನ್ನೆಲೆಯಲ್ಲಿ ಬಂಟ್ವಾಳ ಕೆಳಗಿನ ಪೇಟೆಯಲ್ಲಿ ಪೋಲೀಸ್ ಪಥಸಂಚಲನ ನಡೆಯಿತು.
ಕೋಮು ಸೂಕ್ಮಪ್ರದೇಶವಾದ ಬಂಟ್ವಾಳ ದ ಕೆಳಗಿನ ಪೇಟೆಯಲ್ಲಿ ತುಂಬ್ಯೆ ಜಂಕ್ಸನ್ ವರೆಗೆ ಪೋಲೀಸರು ಪಥಸಂಚಲನ ನಡೆಸಿದರು.
ಚುನಾವಣೆ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ದೈರ್ಯ ತುಂಬುವ ಸಲುವಾಗಿ ಪಥಸಂಚಲನ ನಡೆಸಲಾಯಿತು.
ಈ ಸಂದರ್ಭದಲ್ಲಿ ಎ.ಎಸ್.ಪಿ.ಸೈದುಲು ಅಡಾವತ್, ಬಂಟ್ವಾಳ ವೃತ್ತ ನಿರೀಕ್ಷಕ ಶರಣ್ ಗೌಡ, ಬಂಟ್ವಾಳ ನಗರ ಠಾಣಾ ಉಪನಿರೀಕ್ಷಕ ಚಂದ್ರಶೇಖರ್, ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ, ಟ್ರಾಫಿಕ್ ಎಸ್.ಐ.ಮಂಜುನಾಥ್,
ಐ.ಟಿ.ಬಿ.ಟಿ.ಅಸಿಸ್ಟೆಂಟ್ ರಾಜೇಶ್, ಐ.ಟಿ.ಬಿ.ಟಿ.ಇನ್ಸ್ ಪೆಕ್ಟರ್ ಅನಿಲ್ ಕುಮಾರ್
ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಎಸ್. ಐ.ಸುಧಾಕರ ತೋನ್ಸೆ ಅವರ ಜೊತೆ ಬಂಟ್ವಾಳ ವೃತ್ತದ ಪೋಲೀಸರು ಪಥಸಂಚಲನ ದಲ್ಲಿ ಭಾಗವಹಿಸಿದರು