ಕಕ್ಯಪದವು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಫೆ.15: ದೈವಗಳ ಸಾನ್ನಿಧ್ಯ ಸಂಕೋಚ
ಬಂಟ್ವಾಳ: ಬಂಟ್ವಾಳ ತಾಲೂಕು ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಪುನರ್ನಿರ್ಮಾಣ ಗೊಳ್ಳುತ್ತಿದ್ದು, ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ವಿಶೇಷ ಪರ್ವ ಹಾಗೂ ದೈವಗಳ ಸಾನ್ನಿಧ್ಯ ಸಂಕೋಚ ಫೆ.15ರಂದು ಜರಗಲಿದೆ ಎಂದು ಕ್ಷೇತ್ರದ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.