ಪಡುಮಾರ್ನಾಡಿನಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ
ಮೂಡುಬಿದಿರೆ: ಪಡುಮಾರ್ನಾಡು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ, ರಾಮಕೃಷ್ಣ ಮಿಷನ್ ಮಂಗಳೂರು ಹಾಗೂ ವಿಘ್ನೇಶ್ವರ ಫ್ರೆಂಡ್ಸ್ ಮೂಡುಮಾರ್ನಾಡು ಇದರ ಸಹಯೋಗದಲ್ಲಿ ಸ್ವಚ್ಛ ಪಡುಮಾರ್ನಾಡು ಅಭಿಯಾನದಡಿ ಗ್ರಾ.ಪಂ.ವ್ಯಾಪ್ತಿಯ ತಂಡ್ರಕೆರೆಯಿಂದ ಕಕ್ಕೆಕಾಡುವರೆಗೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಗ್ರಾ.ಪಂ.ಅಧ್ಯಕ್ಷ ಶ್ರೀನಾಥ್ ಸುವರ್ಣ ಅಭಿಯಾನಕ್ಕೆ ಚಾಲನೆ ಚಾಲನೆ ನೀಡಿದರು. ವಿಘ್ನೇಶ್ವರ ಫ್ರೆಂಡ್ಸ್ನ ಅಧ್ಯಕ್ಷ ಗಣೇಶ್ ಕುಕ್ಕುದಪಲ್ಕೆ, ರಾಮಕೃಷ್ಣ ಮಿಷನ್ ವತಿಯಿಂದ ನೀಡಲಾದ ಟಿ-ಶರ್ಟ್ ವಿತರಿಸಿದರು.
ಗ್ರಾ.ಪಂ.ಸದಸ್ಯರಾದ ರೇವತಿ, ಪಿಡಿಒ ಬೀಮಾ ನಾಯ್ಕ್, ಗ್ರಾ.ಪಂ.ಸಿಬ್ಬಂದಿ ವರ್ಗ, ವಿಘ್ನೇಶ್ವರ ಫ್ರೆಂಡ್ಸ್ ಮೂಡುಮಾರ್ನಾಡು ಹಾಗೂ ವಿಘ್ನೇಶ್ವರ ಮಹಿಳಾ ಮಂಡಳಿ, ಮೂಡುಮಾರ್ನಾಡು ಪದಾಧಿಕಾರಿಗಳು ಉಪಸ್ಥಿತರಿದ್ದರು.