ಸುಶಾಂತ್ ಕೋಟ್ಯಾನ್ರ “ಶ್ರೀಗಂಧದ ಅರಮನೆ” ಕಾದಂಬರಿ ಬಿಡುಗಡೆ
ಮೂಡುಬಿದಿರೆ : ಯುವ ಕಾದಂಬರಿಕಾರ ಸುಶಾಂತ್ ಕೋಟ್ಯಾನ್ ಸಚ್ಚರೀಪೇಟೆ ಅವರ `ಶ್ರೀಗಂಧದ ಅರಮನೆ’ ಕಾದಂಬರಿಯನ್ನು ಸಾಹಿತಿ ಸದಾನಂದ ನಾರಾವಿ ಇಲ್ಲಿನ ಪ್ರೆಸ್ಕ್ಲಬ್ನಲ್ಲಿ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು ಈಗಾಗಲೇ ತಮ್ಮ 13 ಕೃತಿಗಳನ್ನು ಹೊರ ತಂದಿರುವ ಸುಶಾಂತ್ ಅವರು ಉತ್ತಮ ಬರಹಗಾರ. ಅವರ ಎಲ್ಲಾ ಬರವಣಿಗೆಗಳು ಹೃದಯಸ್ಪರ್ಶಿಯಾಗಿ ಮೂಡಿ ಬರುತ್ತಿದೆ ಎಂದು ಅಭಿಪ್ರಾಯಪಟ್ಟರು.
ಮೂಡುಬಿದಿರೆ ಪ್ರೆಸ್ಕ್ಲಬ್ನ ಅಧ್ಯಕ್ಷ ಜೇಸನ್ ತಾಕೋಡೆ, ಕಾರ್ಯದರ್ಶಿ ಪ್ರೇಮಶ್ರೀ ಕಲ್ಲಬೆಟ್ಟು ಮತ್ತು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವೇಣುಗೋಪಾಲ ಸಚ್ಚೇರಿಪೇಟೆ ನಿರೂಪಿಸಿದರು.