ಯಶಸ್ವಿ ಉದ್ಯಮಿಯಾಗಲು ಹಣ ಮುಖ್ಯವಲ್ಲ, ಬುದ್ಧಿಶಕ್ತಿ ಮತ್ತು ಶಿಸ್ತು ಮುಖ್ಯ: ಶ್ರೀ ವೆಂಕಟೇಶ್ ನಾಯಕ್
ಶ್ರೀರಾಮ ಪದವಿಪೂರ್ವ ಕಾಲೇಜಿನ ಭಾಮತಿ ವಾಣಿಜ್ಯ ಸಂಘವನ್ನು ಉದ್ಘಾಟಿಸಿದ ಯುನಿಕ್ ಎಜುಸ್ಕಿಲ್ ಇಂಟರ್ನ್ಯಾಷನಲ್, ಬೆಳ್ತಂಗಡಿ ಇದರ ಸಂಯೋಜಕರಾದ ಶ್ರೀ ವೆಂಕಟೇಶ್ ನಾಯಕ್ ಯಶಸ್ವಿ ಉದ್ಯಮಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಸಂತ ಬಲ್ಲಾಳ್ ಇವರು ವಹಿಸಿದ್ದರು.ಉಪನ್ಯಾಸಕರಾದ ಶ್ರೀ ಲಕ್ಷ್ಮೀಶ ಮಯ್ಯ ಸ್ವಾಗತಿಸಿ, ವಿದ್ಯಾರ್ಥಿಗಳಾದ ಗೌರೀಶ್ ಕುಮಾರ್ ವಂದಿಸಿ, ಕುಮಾರಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.