ಯಶೋಧರ ಜೈನ್ ಹಾಗೂ ವೆಂಕಪ್ಪಯ್ಯ ಸನ್ಮಾನ
ಪುತ್ತೂರು : ಕರ್ನಾಟಕ ರಾಜ್ಯ ಬ್ಯಾಂಕಿನ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಕಸ್ಕಾರ್ಡ್ ಬ್ಯಾಂಕಿನ ರಾಜ್ಯಾಧ್ಯಕ್ಷರಾದ ಶ್ರೀ ಕೆ. ಷಡಕ್ಷರಿ ಹಾಗೂ ಜಿಲ್ಲಾ ನಿರ್ದೇಶಕರಾದ ಶ್ರೀ ಸುದರ್ಶನ್ ಜೈನ್ ಇವರುಗಳು ಪುತ್ತೂರು ಪಿಕಾರ್ಡ್ ಬ್ಯಾಂಕಿನಲ್ಲಿ ಕಾರ್ಯ ನಿರ್ವಹಣಾಧಿಕಾರಿ ನಿವೃತ್ತರಾದ ಯಶೋಧರ ಜೈನ್ ಹಾಗೂ ಬೆಳ್ತಂಗಡಿ ಪಿಕಾರ್ಡ್ ಬ್ಯಾಂಕಿನಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ನಿವೃತ್ತರಾದ ವೆಂಕಪ್ಪಯ್ಯ ಇವರುಗಳನ್ನು ಸನ್ಮಾನಿಸಿದರು .
ಈ ಸಂದರ್ಭದಲ್ಲಿ ಜಿಲ್ಲೆಯ ನಬಾರ್ಡ್ ಅಧಿಕಾರಿಗಳಾದ ಶ್ರೀ ಎಸ್. ರಮೇಶ್ ಹಾಗೂ ಪುತ್ತೂರು ಪಿಕಾರ್ಡ್ ಬ್ಯಾಂಕಿನ ಆಧ್ಯಕ್ಷರಾದ ಶ್ರೀ ಮನೋಹರ ರೈ, ಬೆಳ್ತಂಗಡಿ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಪ್ರವೀಣ್ ಚಂದ್ರ ಜೈನ್,
ಕಾರ್ಕಳ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಅಶೋಕ ಕುಮಾರ್ ಬಲ್ಲಾಳ್ ಇವರುಗಳು ಉಪಸ್ಥಿತರಿದ್ದರು .